ರಾಷ್ಟ್ರಗೀತೆ ಹಾಡುವಾಗ ಸಿಎಂ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಕಾಂಗ್ರೆಸ್ ಕಾರ್ಯಕರ್ತ

ಎಲ್ಲರೂ ಗಂಭೀರತೆಯಿಂದ ರಾಷ್ಟ್ರಗೀತೆ ಹಾಡುವ ವೇಳೆ ಕಾರ್ಯಕರ್ತನೊಬ್ಬ ಮುಖ್ಯಮಂತ್ರಿ ವಿ ನಾರಾಯಣಸ್ವಾಮಿ ಅವರ ಜೊತೆ ಸೆಲ್ಫಿ ತೆಗೆದುಕೊಂಡ ಘಟನೆ ...
ನಾರಾಯಣ ಸ್ವಾಮಿ
ನಾರಾಯಣ ಸ್ವಾಮಿ
Updated on

ಪುದುಚೆರಿ: ಎಲ್ಲರೂ ಗಂಭೀರತೆಯಿಂದ ರಾಷ್ಟ್ರಗೀತೆ ಹಾಡುವ ವೇಳೆ ಕಾರ್ಯಕರ್ತನೊಬ್ಬ ಮುಖ್ಯಮಂತ್ರಿ  ವಿ ನಾರಾಯಣಸ್ವಾಮಿ ಅವರ ಜೊತೆ ಸೆಲ್ಫಿ ತೆಗೆದುಕೊಂಡ ಘಟನೆ ಪುದುಚೆರಿಯ ತಿರುವಲ್ಲುವರ್ ನಲ್ಲಿ ನಡೆದಿದೆ.

ತಿರುವಲ್ಲುವರ್ ಪ್ರೌಢ ಶಾಲೆಯಲ್ಲಿ  ಏರ್ಪಡಿಸಿದ್ದ ರಾಷ್ಟ್ರಗೀತೆ ದಿನಾಚರಣೆಯಲ್ಲಿ ಈ ಪ್ರಮಾದ ನಡೆದಿದೆ. ಮಾನವ ಸಂಪನ್ಮೂಲ ಇಲಾಖೆ ಆಗಸ್ಟ್ 9ರಿಂದ 23 ರವರೆಗೆ ಆಜಾದಿ-70 ಎಂಬ ಅಭಿಯಾನ ಆಯೋಜಿಸಿದ್ದು, ಸ್ವಾತಂತ್ರ್ಯಕ್ಕಾಗಿ ಮಡಿದವರ ಸ್ಮರಣಾ ಕಾರ್ಯಕ್ರಮ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ  ನಿನ್ನೆ ಶಾಲೆಯಲ್ಲಿ ಬೆಳಗ್ಗೆ 11 ಗಂಟೆಗೆ ರಾಷ್ಟ್ರಗೀತೆ ಹಾಡಲಾಗುತ್ತಿತ್ತು.

ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿ ಮತ್ತು ಶಾಲಾ ಮಕ್ಕಳು ರಾಷ್ಟ್ರಗೀತೆ ಹಾಡುತ್ತಿದ್ದರು. ಈ ವೇಳೆ ಓರ್ಲ್ನಾನ್ ಪೆಟ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿಎಂ ಜೊತೆ ಸೆಲ್ಫಿ ತೆಗೆದುಕೊಂಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com