ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ರೈಲ್ವೆ ಪೊಲೀಸ್ ಅಧಿಕಾರಿ, ಸಹಾಯಕ ಸಬ್ ಇನ್ಸ್ಪೆಕ್ಟರ್ ಪ್ರತಾಪ್ ರುದ್ರ ಮಿಶ್ರಾ, ಆಟೋವೊಂದನ್ನು ಕಳುಹಿಸಿಕೊಡಲು ನಿರ್ಧರಿಸಿ, ಆಟೋದವರನ್ನು ಕೇಳಿದರೆ ಅದಕ್ಕೆ 3,500 ರೂ. ನೀಡುವಂತೆ ಕೇಳಿದರು. ಆದರೆ ನನಗೆ 1,000 ರೂ. ನೀಡಲಷ್ಟೇ ಅವಕಾಶವಿತ್ತು. ಹೀಗಾಗಿ ಅದು ಸಾಧ್ಯವಾಗಲಿಲ್ಲ. ಬಳಿಕ ಅನಿವಾರ್ಯವಾಗಿ ಗ್ರೇಡ್ 4 ಕೆಲಸಗಾರರಲ್ಲಿ ಮನವಿ ಮಾಡಿಕೊಂಡು ಮೃತ ದೇಹವನ್ನು 2 ಕಿಲೋ ಮೀಟರ್ ದೂರದ ರೈಲ್ವೆ ನಿಲ್ದಾಣಕ್ಕೆ ಸಾಗಿಸುವ ಕೆಲಸ ಮಾಡಬೇಕಾಯಿತು ಎಂದಿದ್ದಾರೆ. ರೈಲ್ವೆ ನಿಲ್ದಾಣದಿಂದ ಬಾಲಸೋರ್ಗೆ ಶವ ಸಾಗಿಸಿ ಅಲ್ಲಿ ಅವರ ಸಂಬಂಧಿಕರೆಲ್ಲರೂ ಸೇರಿ ಪಡೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.