ದೆಹಲಿ ಮಳೆ ಬಗ್ಗೆ ಹಾಸ್ಯ ಮಾಡಿದ ಅಮೆರಿಕ ಕಾರ್ಯದರ್ಶಿ ಜಾನ್ ಕೆರ್ರಿ

ನವದೆಹಲಿಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಭಾರತ ಪ್ರವಾಸದಲ್ಲಿರುವ ಅಮೆರಿಕ ಕಾರ್ಯದರ್ಶಿ ಜಾನ್ ಕೆರ್ರಿ ಮಳೆ ಬಗ್ಗೆ ಲಘು ಹಾಸ್ಯ ಮಾಡಿದ್ದಾರೆ.
ಜಾನ್ ಕೆರ್ರಿ
ಜಾನ್ ಕೆರ್ರಿ
Updated on

ನವದೆಹಲಿ: ನವದೆಹಲಿಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಭಾರತ ಪ್ರವಾಸದಲ್ಲಿರುವ ಅಮೆರಿಕ ಕಾರ್ಯದರ್ಶಿ ಜಾನ್ ಕೆರ್ರಿ ಮಳೆ ಬಗ್ಗೆ ಲಘು ಹಾಸ್ಯ ಮಾಡಿದ್ದಾರೆ. 
ಐಐಟಿ- ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಾನ್ ಕೆರ್ರಿ, ನೀವು ದೋಣಿಗಳಲ್ಲಿ ಬಂದಿದ್ದೀರಾ? ಎಂದು ವಿದ್ಯಾರ್ಥಿಗಳನ್ನು ಕೇಳಿದ್ದಾರೆ. ನೀವು ದೋಣಿಗಳಲ್ಲಿ ಬಂದಿದ್ದೀರಾ ಅಥವಾ ನೆಲ, ನೀರು ಎರಡರಲ್ಲೂ ಸಂಚರಿಸುವ ವಾಹನಗಳಲ್ಲಿ ಬಂದಿದ್ದೀರಾ ನನಗೆ ಗೊತ್ತಿಲ್ಲ. ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.
ನವದೆಹಲಿಯ ಐಐಟಿ ರಸ್ತೆಯಲ್ಲಿ ನೀರು ನಿಂತಿದ್ದು, ಕಾರ್ಯಕ್ರಮಕ್ಕೆ ತಡವಾಗಿ ಬಂದ ಜಾನ್ ಕೆರ್ರಿ ದೆಹಲಿಯ ಮಳೆ ಬಗ್ಗೆ ಲಘು ಧಾಟಿಯಲ್ಲಿ ಹಾಸ್ಯ ಮಾಡಿದ್ದಾರೆ, ನವದೆಹಲಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ಜಾನ್ ಕೆರ್ರಿ ಭೇಟಿ ನೀಡಬೇಕಿದ್ದ ಮೂರೂ ಧಾರ್ಮಿಕ ಕೇಂದ್ರಗಳ ಭೇಟಿಯನ್ನು ರದ್ದುಪಡಿಸಿದ್ದಾರೆ. ಟ್ರಾಫಿಕ್ ನಲ್ಲಿ ಸಿಲುಕಿದ ಪರಿಣಾಮ ಕೆರ್ರಿ ತಮ್ಮ ಬೆಂಗಾವಲು ಪಡೆಯೊಂದಿಗೆ ವಿಮಾನ ನಿಲ್ದಾಣದಿಂದ ಹೋಟೆಲ್ ಗೆ ತೆರಳಲು ಸುಮಾರು ಒಂದು ಗಂಟೆ ಕಾದಿದ್ದಾರೆ ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com