ಗೋವಾದ ಬಿಚೊಲಿಮ್ ನಲ್ಲಿ ನಿನ್ನೆ ನಡೆದ ಪಕ್ಷದ ರ್ಯಾಲಿ ವಿಜಯ್ ಸಂಕಲ್ಪದಲ್ಲಿ ಮಾತನಾಡಿದ ಅವರು, ಮುಂದುವರಿದು ಮಾತನಾಡಿದರು. ಗೋವಾದಲ್ಲಿ ಮಾಂಡೊವಿ ನದಿಗೆ ಮೂರನೇ ಸೇತುವೆ ನಿರ್ಮಾಣಕ್ಕೆ ಅನುಮತಿ ಸಿಗಲು ಕೋರ್ಟ್ ಗೆ ಮೊರೆ ಹೋಗಬೇಕಾಗಿ ಬಂತು. ಸಾಲಿಗಾವೊದಲ್ಲಿ ಕಸ ಸಂಸ್ಕರಣ ಘಟಕ ನಿರ್ಮಾಣಕ್ಕೆ ಕೂಡ ಭಾರೀ ವಿರೋಧ ಕೇಳಿಬಂತು. ಪ್ರತಿಯೊಂದು ಪರಿಸರಕ್ಕೆ ಸಂಬಂಧಪಟ್ಟ ಅಭಿವೃದ್ಧಿ ಕಾರ್ಯಗಳನ್ನು ಮಾಧ್ಯಮ ಮತ್ತು ಸಾರ್ವಜನಿಕ ಪ್ರತಿಭಟನೆಗಳ ಮೂಲಕ ವಿರೋಧಿಸಲಾಗುತ್ತಿದೆ. ಜುವಾರಿ ನದಿಗೆ ಅಡ್ಡಲಾಗಿ ಕಟ್ಟುವ ಎರಡನೇ ಸೇತುವೆಗೆ ಕೂಡ ಜನರು ಬೀದಿಯಲ್ಲಿ ನಿಂತು ಪ್ರತಿಭಟನೆ ನಡೆಸುತ್ತಿದ್ದಾರೆ. ಸೇತುವೆ ನಿರ್ಮಾಣಕ್ಕೆ ಹಲವು ವರ್ಷಗಳ ಹಿಂದೆಯೇ ಭೂಮಿ ಪಡೆಯಲಾಗಿತ್ತು ಎಂದರು.