''ಅಮ್ಮನವರು ಉಪ್ಮಾ, ಪೊಂಗಲ್, ಮೊಸರನ್ನ ಮತ್ತು ಆಲೂಗಡ್ಡೆ ಪದಾರ್ಥವನ್ನು ಇಷ್ಟಪಡುತ್ತಿದ್ದರು. ಪ್ರತಿ ತುತ್ತು ಆಹಾರ ತಿನ್ನುವಾಗಲೂ ನಾನು ಶೀಲಾಳಿಗಾಗಿ ಈ ತುತ್ತು ತಿನ್ನುತ್ತಿದ್ದೇನೆ, ಸಾಮುವಿಗಾಗಿ ತಿನ್ನುತ್ತೇನೆ, ಇನ್ನೊಂದು ಚಮಚ ತುತ್ತನ್ನು ಮತ್ತೊಬ್ಬ ನರ್ಸ್ ನ್ನು ತೋರಿಸಿ ಅವಳಿಗಾಗಿ ತಿನ್ನುತ್ತೇನೆ ಎನ್ನುತ್ತಿದ್ದರು. ಇಂತಹ ಮಾತುಗಳಿಂದಲೇ ಅವರು ಅವರನ್ನು ಮತ್ತು ನಮ್ಮನ್ನು ಉತ್ತೇಜಿಸುತ್ತಿದ್ದರು ಎನ್ನುತ್ತಾರೆ.