ದೇಶ
'ಯಾದವ ಕಲಹ' ಕೆಲವೊಮ್ಮೆ ಕಾಮಿಡಿ, ಮತ್ತೊಮ್ಮೆ ಮೆಲೊಡಿ ಮತ್ತು ಟ್ರಾಜಿಡಿಯಲ್ಲಿ ಕೊನೆಯಾಗುತ್ತದೆ: ವೆಂಕಯ್ಯ ನಾಯ್ಡು
ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದೊಳಗೆ ಕುಟುಂಬ ನಾಟಕ ನಡೆಯುತ್ತಿದ್ದು, ಅದು ಕೆಲವು...
ನವದೆಹಲಿ: ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದೊಳಗೆ ಕುಟುಂಬ ನಾಟಕ ನಡೆಯುತ್ತಿದ್ದು, ಅದು ಕೆಲವು ಸಂದರ್ಭಗಳಲ್ಲಿ ಕಾಮಿಡಿ, ಇನ್ನು ಕೆಲವು ಸಮಯದಲ್ಲಿ ಮೆಲೊಡಿಯಾಗಿದ್ದು, ಅದು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಟ್ರಾಜಿಡಿಯಲ್ಲಿ ಕೊನೆಯಾಗುತ್ತದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ.
''ಅದು ಅಕ್ಷರಶಃ ನಾಟಕ, ಕುಟುಂಬ ನಾಟಕ. ಕೆಲವೊಮ್ಮೆ ಅದು ತಮಾಷೆಯಾಗಿರುತ್ತದೆ, ಇನ್ನು ಕೆಲವೊಮ್ಮೆ ಸುಮಧುರವಾಗಿರುತ್ತದೆ, ಆದರೆ ಅದು ದುರಂತದಲ್ಲಿ ಕೊನೆಯಾಗುವುದು ಖಂಡಿತ ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡುತ್ತಾ ಹೇಳಿದರು.
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವನ್ನು ಜನ ಸೋಲಿಸುತ್ತಾರೆ. ಈ ಕುಟುಂಬ ಕಲಹ, ನಾಟಕದಿಂದಾಗಿ ದುರಂತದಲ್ಲಿ ಕೊನೆಯಾಗುತ್ತದೆ ಎಂದು ವ್ಯಂಗವಾಗಿ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ