ನವದೆಹಲಿ: ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದೊಳಗೆ ಕುಟುಂಬ ನಾಟಕ ನಡೆಯುತ್ತಿದ್ದು, ಅದು ಕೆಲವು ಸಂದರ್ಭಗಳಲ್ಲಿ ಕಾಮಿಡಿ, ಇನ್ನು ಕೆಲವು ಸಮಯದಲ್ಲಿ ಮೆಲೊಡಿಯಾಗಿದ್ದು, ಅದು ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಟ್ರಾಜಿಡಿಯಲ್ಲಿ ಕೊನೆಯಾಗುತ್ತದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ.