ಪಾಲುದಾರನ ಕೊಲೆಗೆ ಯತ್ನಿಸಿ ತಾನೇ ಆತ್ಮಹತ್ಯೆ ಮಾಡಿಕೊಂಡ ವೈದ್ಯ

ಆಸ್ಪತ್ರೆಯ ಪಾಲುದಾರ ವೈದ್ಯನ ಮೇಲೆ ಗುಂಡಿನ ದಾಳಿ ನಡೆಸಿ, ಕೊಲೆಗೆ ಯತ್ನಿಸಿದ ವೈದ್ಯನೊಬ್ಬ ತಾನೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್ ನ ...
ಮೃತ ವೈದ್ಯ ಶಶಿ ಕುಮಾರ್
ಮೃತ ವೈದ್ಯ ಶಶಿ ಕುಮಾರ್

ಹೈದರಾಬಾದ್: ಆಸ್ಪತ್ರೆಯ ಪಾಲುದಾರ ವೈದ್ಯನ ಮೇಲೆ ಗುಂಡಿನ ದಾಳಿ ನಡೆಸಿ, ಕೊಲೆಗೆ ಯತ್ನಿಸಿದ ವೈದ್ಯನೊಬ್ಬ ತಾನೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್ ನ ಹಿಮಾಯತ್ ನಗರದಲ್ಲಿ ನಡೆದಿದೆ.

ಸೋಮವಾರ ಸಂಜೆ ಹಿಮಾಯತ್‌ ನಗರದ ಬಳಿ ವೈದ್ಯ ಶಶಿ ಕುಮಾರ್ ಎಂಬಾತ ಡಾ.ಉದಯ್ ಕುಮಾರ್‌ ಮೇಲೆ ಫೈರಿಂಗ್ ಮಾಡಿದ್ದಾನೆ. ಈ ಘಟನೆ ನಡೆದ ಬಳಿಕ ವೈದ್ಯ ಶಶಿ ಕುಮಾರ್ ಮೋಹಿನ್‌ಬಾದ್‌ ಎಂಬಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.  

ಮೃತ ವೈದ್ಯ ಶಶಿ ಕುಮಾರ್ ಮತ್ತು ದಾಳಿಗೊಳಾಗದ ಡಾ.ಉದಯ್ ಹಾಗೂ ಡಾ.ಸಾಯಿಕುಮಾರ್ ಎಂಬುವರು ಕಳೆದ ಜನವರಿ 1ರಂದು, ಸುಮಾರು 15 ಕೋಟಿ ವೆಚ್ಚದಲ್ಲಿ 100 ಬೆಡ್‌ನ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯನ್ನು ಆರಂಭಿಸಿದ್ದರು. ಆದರೆ, ಶಶಿ ಕುಮಾರ್‌‌ಗೆ ತಿಳಿಸದೆ ಡಾ.ಉದಯ್ ಮತ್ತೊಬ್ಬರನ್ನು ಆಸ್ಪತ್ರೆಯ ಪಾಲುದಾರರನ್ನಾಗಿ ಸೇರಿದ್ದರು ಎನ್ನಲಾಗಿದೆ.

ಈ ಕುರಿತು ನಿನ್ನೆ ಸಂಜೆ 4.30ರ ಸುಮಾರಿಗೆ ಕಾರಿನಲ್ಲಿ ಚರ್ಚೆ ನಡೆಯತ್ತಿದ್ದಾಗ ಕುಪಿತಗೊಂಡ ಡಾ.ಶಶಿ ಏಕಾಏಕಿ ಗುಂಡಿನ ದಾಳಿ ಮಾಡಿದ್ದಾನೆ. ಇದರಿಂದ ತೀವ್ರವಾಗಿ ಗಾಯಗೊಂಡಿರುವ ಡಾ.ಉದಯ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾನೆ.

ಇದಾದ ಬಳಿಕ ಡಾ.ಶಶಿಕುಮಾರ್ ತನ್ನ ಲೈಸೆನ್ಸ್‌ ಹೊಂದಿದ್ದ ಪಿಸ್ತೂಲ್‌ನಿಂದ ಗುಂಡು ಹಾರಿಸಿಕೊಂಡು ಮೋಹಿನ್‌ಬಾದ್‌ ಬಳಿಯ ತನ್ನ ಸ್ನೇಹಿತನ ಫಾರ್ಮ್ ಹೌಸ್ ನಲ್ಲಿ ಸಾವಿಗೆ ಶರಣಾಗಿದ್ದಾನೆ. ಇನ್ನು ಈ ಸಂಬಂಧ ಶಶಿ ಕುಮಾರ್ ಡೆತ್ ನೋಟ್ ಬರೆದಿದ್ದು ಪೊಲೀಸರ ಕೈಗೆ ಸಿಕ್ಕಿದೆ. ಸದ್ಯ ಇಡೀ ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.ಸಾಯಿಕುಮಾರ್ ಸ್ಥಳದಿಂದ ನಾಪತ್ತೆಯಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com