ರಾ.ಹೆದ್ದಾರಿ 1ರಲ್ಲಿ ಮಂಜಿನಿಂದಾಗಿ 25 ಕಾರುಗಳ ಡಿಕ್ಕಿ, 4 ಸಾವು

ತೀವ್ರ ಮಂಜು ಕವಿದಿದ್ದರಿಂದ ರಾಷ್ಟ್ರೀಯ ಹೆದ್ದಾರಿ ಒಂದರಲ್ಲಿ ರಸ್ತೆ ಕಾಣಿಸದ ಪರಿಣಾಮ ಬುಧವಾರ...
ಅಪಘಾತಕ್ಕೊಳಗಾದ ಲಾರಿ
ಅಪಘಾತಕ್ಕೊಳಗಾದ ಲಾರಿ
Updated on
ಕರ್ನಲ್: ತೀವ್ರ ಮಂಜು ಕವಿದಿದ್ದರಿಂದ ರಾಷ್ಟ್ರೀಯ ಹೆದ್ದಾರಿ ಒಂದರಲ್ಲಿ ರಸ್ತೆ ಕಾಣಿಸದ ಪರಿಣಾಮ ಬುಧವಾರ 25 ಕಾರುಗಳ ನಡುವೆ ಡಿಕ್ಕಿ ಸಂಭವಿಸಿದ್ದು, ಘಟನೆಯಲ್ಲಿ ನಾಲ್ವರು ಮೃತಪಟ್ಟಿದ್ದಾರೆ.
'ತೀವ್ರ ಮಂಜು ಕವಿದ ಪರಿಣಾಮ ಸರಣಿ ಅಪಘಾತ ಸಂಭವಿಸಿ ನಾಲ್ಕೈದು ಮಂದಿ ಮೃತಪಟ್ಟಿದ್ದಾರೆ' ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.
'ಮಂಜಿನಿಂದಾಗಿ ಹಲವು ವಾಹನಗಳ ನಡುವೆ ಪರಸ್ಪರ ಡಿಕ್ಕಿ ಸಂಭವಿಸಿದ ಪರಿಣಾಮ ಅಮೃತಸರಕ್ಕೆ ತೆರಳುತ್ತಿದ್ದ ನಾಲ್ವರು ಮೃತಪಟ್ಟಿದ್ದಾರೆ. ಮೃತದೇಹಗಳನ್ನು ಕರ್ನಲ್ ಆಸ್ಪತ್ರೆಗೆ ಕಳುಹಿಸಿದ್ದೇವೆ' ಎಂದು  ಪೊಲೀಸ್ ಅಧಿಕಾರಿ ಕನ್ವರ್ ಪಾಲ್ ಅವರು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಫಿಗೋ ಕಾರೊಂದು ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com