ಜೆಎನ್ ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರನ್ನು ಬಂಧಿಸುವ ಮೂಲಕ ಕೇಂದ್ರ ಸರ್ಕಾರ ಬಿಬಿವಿಪಿಗೆ ಎಡರಂಗ ಟಾರ್ಗೆಟ್ ಮಾಡಲು ಪರೋಕ್ಷ ಸಮ್ಮತಿ ಸೂಚಿಸಿದೆ ಮತ್ತು ಈ ಸಂಬಂಧ ಎಬಿವಿಪಿ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದಂತೆ ದೆಹಲಿ ಪೊಲೀಸರಿಗೆ ಸೂಚಿಸಿದೆ ಎಂದು ಎಡರಂಗ ಆರೋಪಿಸಿದೆ. ಅಲ್ಲದೆ ಈಗ ಜೆಎನ್ ಯುನಲ್ಲಿ ನಡೆಯುತ್ತಿರುವ ಬೆಳವಣೆಯನ್ನು ತುರ್ತು ಪರಿಸ್ಥಿತಿಗೆ ಹೋಲಿಸಿದೆ.