ಮಾರ್ಚ್ 7ರಂದು ನಡೆಯಲಿರುವ ಟೆರಿ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಪಚೌರಿ ಅವರಿಂದ ಪದವಿ ಪತ್ರ ಸ್ವೀಕರಿಸುವುದಿಲ್ಲ ಎಂದು ವಿದ್ಯಾರ್ಥಿಗಳು ತಿಳಿಸಿದ್ದರು. ಅಲ್ಲದೇ, ಟೆರಿ ಕಾರ್ಯನಿರ್ವಾಹಕ ಉಪಾಧ್ಯಕ್ಷರನ್ನಾಗಿ ಪರಿಸರ ತಜ್ಞ ಆರ್ ಕೆ ಪಚೌರಿ ಅವರನ್ನು ನೇಮಕ ಮಾಡಿದ್ದನ್ನು ವಿರೋಧಿಸಿ ವಿವಿ ವಿದ್ಯಾರಥಿಗಳು ಪ್ರತಿಭಟನೆ ನಡೆಸಿದರು. ಈ ಹಿನ್ನಲೆಯಲ್ಲಿ, ಘಟಿಕೋತ್ಸವದಲ್ಲಿ ಪಾಲ್ಗೊಳ್ಳದಿರಲು ಪಚೌರಿ ತೀರ್ಮಾನಿಸಿದ್ದು, ದೀರ್ಘ ರಜೆ ಮೇಲೆ ತೆರಳಿದ್ದಾರೆ ಎಂದು ಹಂಗಾಮಿ ಕುಲಪತಿ ರಾಜೀವ್ ಸೇಥ್ ತಿಳಿಸಿದ್ದಾರೆ.