ಕಾಶ್ಮೀರದಲ್ಲಿ ಉಗ್ರರ ಗುಂಡಿಗೆ ಕರ್ನಾಟಕದ ಯೋಧ ಬಲಿ

ಜಮ್ಮು ಮತ್ತು ಕಾಶ್ಮೀರದಲ್ಲಿ ಶನಿವಾರ ಉಗ್ರರ ಜತೆ ನಡೆದ ಗುಂಡಿನ ಕಾಳಗದಲ್ಲಿ ಕರ್ನಾಟಕದ ಯೋಧರೊಬ್ಬರು...
ಸಾಂದರ್ಭಿಕ ಚಿತ್ರ- ಸಹದೇವ ಮಾರುತಿ ಮೋರೆ(ಬಲ ತುದಿಯಲ್ಲಿ)
ಸಾಂದರ್ಭಿಕ ಚಿತ್ರ- ಸಹದೇವ ಮಾರುತಿ ಮೋರೆ(ಬಲ ತುದಿಯಲ್ಲಿ)
Updated on
ವಿಜಯಪುರ: ಜಮ್ಮು ಮತ್ತು ಕಾಶ್ಮೀರದಲ್ಲಿ ಶನಿವಾರ ಉಗ್ರರ ಜತೆ ನಡೆದ ಗುಂಡಿನ ಕಾಳಗದಲ್ಲಿ ಕರ್ನಾಟಕದ ಯೋಧರೊಬ್ಬರು ಮೃತಪಟ್ಟಿದ್ದಾರೆ.
ವಿಜಯಪುರದ ಇಂಡಿ ತಾಲ್ಲೂಕಿನ ಸಾವಳಸಂಗ ಗ್ರಾಮದ ಸಹದೇವ ಮಾರುತಿ ಮೋರೆ(26) ಉಗ್ರರ ಗುಂಡಿಗೆ ಬಲಿಯಾದ ಯೋಧ.
ಯೋಧ ಮಾರುತಿ ಮೋರೆ ಅವರ ಪಾರ್ಥೀವ ಶರೀರ ಸಂಜೆ ಬೆಳಗಾವಿ ತಲುಪಲಿದ್ದು, ಅಲ್ಲಿಂದ ಸಾವಳಸಂಗ ಗ್ರಾಮಕ್ಕೆ ಕೊಂಡಯ್ಯಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. 
ಶನಿವಾರ ಜಮ್ಮು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಭಾರತೀಯ ಯೋಧರು ಮತ್ತು ಉಗ್ರರ ನಡುವೆ ಗುಂಡಿನ ಕಾಳಗ ನಡೆದಿತ್ತು, ಘಟನೆಯಲ್ಲಿ ಐವರು ಉಗ್ರರು ಮತ್ತು ಇಬ್ಬರು ಯೋಧರು ಮೃತಪಟ್ಟಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com