ಲಾಹೋರ್: ವಿವಾದಿತ ಜೆಎನ್ ಯು ಪ್ರಕರಣ ದಿನದಿಂದ ದಿನಕ್ಕೆ ಹೊಸ ಬಣ್ಣವನ್ನು ಪಡೆದುಕೊಳ್ಳುತ್ತಿದ್ದು, ಇದೀಗ ಪ್ರಕರಣ ಸಂಬಂಧ ಲಷ್ಕರ್-ಇ-ತೊಯ್ಬಾ ಸಂಘಟನೆ ಮುಖ್ಯಸ್ಥ ಹಾಗೂ ಮುಂಬೈ 26/11 ದಾಳಿ ಪ್ರಮುಖ ರುವಾರಿ ಉಗ್ರ ಹಫೀಜ್ ಸಯೀದ್ ಹೇಳಿಕೆಯನ್ನು ನೀಡಿದ್ದು, ನಾನು ಯಾರನ್ನೂ ಬೆಂಬಲಿಸಿಲ್ಲ. ಭಾರತೀಯ ಸಚಿವರು ತಮ್ಮ ದೇಶದ ಜನರನ್ನು ದಾರಿ ತಪ್ಪಿಸುತ್ತಿದ್ದಾರೆಂದು ಸೋಮವಾರ ಹೇಳಿಕೊಂಡಿದ್ದಾನೆ.