ಜಾಟ್ ಸಮುದಾಯಕ್ಕೆ ಶಾಂತಿ ಕಾಪಾಡಲು ವಿರೇಂದ್ರ ಸೆಹ್ವಾಗ್ ಮನವಿ

ಮೀಸಲಾತಿಗಾಗಿ ಜಾಟ್ ಸಮುದಾಯದ ಹೋರಾಟ ಉಗ್ರ ಸ್ವರೂಪ ಪಡೆದಿದ್ದು, ಶಾಂತಿ ಕಾಪಾಡುವಂತೆ ಭಾರತದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಮನವಿ...
ವಿರೇಂದ್ರ ಸೆಹ್ವಾಗ್
ವಿರೇಂದ್ರ ಸೆಹ್ವಾಗ್
Updated on

ನವದೆಹಲಿ: ಮೀಸಲಾತಿಗಾಗಿ ಜಾಟ್ ಸಮುದಾಯದ ಹೋರಾಟ ಉಗ್ರ ಸ್ವರೂಪ ಪಡೆದಿದ್ದು, ಶಾಂತಿ ಕಾಪಾಡುವಂತೆ ಭಾರತದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಮನವಿ ಮಾಡಿದ್ದಾರೆ.

ನಮ್ಮ ಸಮುದಾಯದವರು ಉದ್ಧಾರಕರಾಗಬೇಕೆ ಹೊರತು ವಿಧ್ವಂಸಕರಾಗಬಾರದು. ಮೀಸಲಾತಿಗಾಗಿ ಹಿಂಸಾತ್ಮಕ ಹೋರಾಟ ತೊರೆದು ಶಾಂತಿ ಮತ್ತು ಅಹಿಂಸೆಯಿಂದ ಸಂವಿಧಾನ ಬದ್ಧವಾಗಿ ಬೇಡಿಕೆ ಪೂರೈಕೆಗೆ ಶ್ರಮಿಸೋಣ ಎಂದು ಸೆಹ್ವಾಗ್ ಟ್ವೀಟ್ ಮಾಡಿದ್ದಾರೆ.

ದೇಶದ ಎಲ್ಲಾ ವಿಭಾಗಗಳಲ್ಲಿ ಜಾಟ್ ಪಂಗಡ ಸೇವೆ ಸಲ್ಲಿಸುತ್ತಿದ್ದು ಶಾಂತಿಯುತವಾಗಿ ಹೋರಾಟ ಮಾಡಿ. ಪರಿಸ್ಥಿತಿ ಬಿಗಡಾಯಿಸಿರುವ ರೋಹ್ತಕ್, ಜಿಂದ್, ಭಿವಾನಿ, ಝಾಜರ್ ಮತ್ತು ಹಿಸಾರ್ ಪ್ರದೇಶಗಳಲ್ಲಿ ಅಸ್ಥವ್ಯಸ್ಥಗೊಂಡಿರುವ ಜನ ಜೀವನ ಸಹಜ ಸ್ಥಿತಿಗೆ ತರುವಂತೆ ಶ್ರಮಿಸಿ ಎಂದು ಕೋರಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com