ಪ್ರತಿಭಟನೆ ಸಂಬಂಧಿಸಿ ಮಾತನಾಡಿರುವ ಖಟ್ಟರ್ ಅವರು, ಜನರ ಆಗ್ರಹವನ್ನು ಕೇಳಲು ಸರ್ಕಾರ ತಯಾರಿದ್ದು, ಕಾನೂನು, ಸುವ್ಯವಸ್ಥೆಯನ್ನು ಕಾಪಾಡುವಂತೆ ರಾಜ್ಯದ ಜನತೆಗೆ ಕರೆ ನೀಡಿದ್ದಾರೆ. ಸಾರ್ವಜನಿಕ ಆಸ್ತಿಯನ್ನು ನಾಶಪಡಿಸುವುದರಿಂದ ಯಾರಿಗೂ ಲಾಭವಿಲ್ಲ. ಆಧಾರರಹಿತ ವದಂತಿಗಳನ್ನು ನಂಬಬೇಡಿ. ರಾಜ್ಯದಲ್ಲಿ ಶಾಂತಿಯನ್ನು ಕಾಪಡಿ ಎಂದು ಹೇಳಿದ್ದಾರೆ.