ಬಿಜೆಪಿಯೇತರ ರಾಜ್ಯಕ್ಕೆ ಕನ್ಹಯ್ಯ ಪ್ರಕರಣ ವರ್ಗಾಯಿಸಿ: ಕಾಂಗ್ರೆಸ್

ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯ ವಿವಾದಕ್ಕೆ ಸಂಬಂಧಿ ದೇಶದ್ರೋಹ ಪ್ರಕರಣ ಎದುರಿಸುತ್ತಿರುವ ಕನ್ಹಯ್ಯ ಕುಮಾರ್ ಪ್ರಕರಣವನ್ನು ಬಿಜೆಪಿಯೇತರ ರಾಜ್ಯಕ್ಕೆ ವರ್ಗಾಯಿಸುವಂತೆ ಕಾಂಗ್ರೆಸ್ ಶನಿವಾರ ಆಗ್ರಹಿಸಿದೆ...
ಬಿಜೆಪಿಯೇತರ ರಾಜ್ಯಕ್ಕೆ ಕನ್ಹಯ್ಯ ಪ್ರಕರಣ ವರ್ಗಾಯಿಸಿ: ಕಾಂಗ್ರೆಸ್
ಬಿಜೆಪಿಯೇತರ ರಾಜ್ಯಕ್ಕೆ ಕನ್ಹಯ್ಯ ಪ್ರಕರಣ ವರ್ಗಾಯಿಸಿ: ಕಾಂಗ್ರೆಸ್

ಲಖನೌ: ಜವಾಹರ್ ಲಾಲ್ ನೆಹರು ವಿಶ್ವವಿದ್ಯಾಲಯ ವಿವಾದಕ್ಕೆ ಸಂಬಂಧಿ ದೇಶದ್ರೋಹ ಪ್ರಕರಣ ಎದುರಿಸುತ್ತಿರುವ ಕನ್ಹಯ್ಯ ಕುಮಾರ್ ಪ್ರಕರಣವನ್ನು ಬಿಜೆಪಿಯೇತರ ರಾಜ್ಯಕ್ಕೆ ವರ್ಗಾಯಿಸುವಂತೆ ಕಾಂಗ್ರೆಸ್ ಶನಿವಾರ ಆಗ್ರಹಿಸಿದೆ.

ಈ ಕುರಿತಂತೆ ಮಾತನಾಡಿರುವ ಕಾಂಗ್ರೆಸ್ ನಾಯಕ ಪ್ರಮೋದ್ ತಿವಾರಿ ಅವರು, ಕನ್ಹಯ್ಯ ಪ್ರಕರಣ ಸಂಬಂಧ ದೆಹಲಿ ಪೊಲೀಸರು ನಡೆದುಕೊಳ್ಳುತ್ತಿರುವ ರೀತಿ ನಿಜಕ್ಕೂ ಅವಮಾನವಾದದ್ದು ಹಾಗೂ ದುರದೃಷ್ಟಕರವಾದದ್ದು. ಕನ್ಹಯ್ಯ ಪ್ರಕರಣವನ್ನ ಬಿಜೆಪಿಯೇತರ ಸರ್ಕಾರವಾಗಿರುವ ಉತ್ತರಪ್ರದೇಶ ಅಥವಾ ಬಿಹಾರಕ್ಕೆ ವರ್ಗಾಯಿಸಿ. ಇದರಿಂದ ಆತನಿಗೆ ಜಾಮೀನು ಸಿಗುತ್ತದೆ ಹಾಗೂ ಪ್ರಕರಣ ಸಂಬಂಧವಿರುವ ಸತ್ಯಾಸತ್ಯತೆಗಳು ಹೊರಬರುತ್ತದೆ ಎಂದು ಹೇಳಿದ್ದಾರೆ.

ಕನ್ಹಯ್ಯ ಕುಮಾರ್ ದೇಶ ವಿರೋಧ ಘೋಷಣೆಗಳನ್ನು ಕೂಗಿದ್ದಾನೆಂದು ಸುಳ್ಳು ಆರೋಪಗಳನ್ನು ದಾಖಲಿಸಿಕೊಳ್ಳಲಾಗಿದೆ. ಆದರೆ, ಇದೀಗ ದಾಖಲೆಗಳಿಂದ ಆತನ ವಿರುದ್ಧ ತಪ್ಪು ಆರೋಪಗಳನ್ನು ಮಾಡಿರುವುದು ಬಹಿರಂಗವಾಗಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com