ಸ್ನೇಹ ಸೂಚಕವಾಗಿ ಉದ್ಧವ್ ಠಾಕ್ರೆಗೆ ಹುಲಿಯ ಪ್ರತಿಕೃತಿ ನೀಡಲಿರುವ ಬಿಜೆಪಿ

ಶಿವಸೇನೆ- ಬಿಜೆಪಿ ನಡುವೆ ಉಂಟಾಗಿರುವ ಬಿರುಕನ್ನು ದೂರ ಮಾಡುವ ನಿಟ್ಟಿನಲ್ಲಿ ಶಿವಸೇನೆ ಮುಖಂಡ ಉದ್ಧವ್ ಠಾಕ್ರೆಗೆ ಹುಲಿಯ ಪ್ರತಿಕೃತಿ ನೀಡಲು ಬಿಜೆಪಿ ನಿರ್ಧರಿಸಿದೆ.
ಸ್ನೇಹ ಸೂಚಕವಾಗಿ ಉದ್ಧವ್ ಠಾಕ್ರೆಗೆ ಹುಲಿಯ ಪ್ರತಿಕೃತಿ ನೀಡಲಿರುವ ಬಿಜೆಪಿ

ಮುಂಬೈ: ಶಿವಸೇನೆ- ಬಿಜೆಪಿ ನಡುವೆ ಉಂಟಾಗಿರುವ ಬಿರುಕನ್ನು ದೂರ ಮಾಡುವ ನಿಟ್ಟಿನಲ್ಲಿ ಶಿವಸೇನೆ ಮುಖಂಡ ಉದ್ಧವ್ ಠಾಕ್ರೆಗೆ ಹುಲಿಯ ಪ್ರತಿಕೃತಿ ನೀಡಲು ಬಿಜೆಪಿ ನಿರ್ಧರಿಸಿದೆ.
ಹುಲಿ ಶಿವಸೇನೆಯ ಚಿಹ್ನೆಯೂ ಆಗಿದ್ದು, ಉದ್ಧವ್ ಠಾಕ್ರೆ ಅವರಿಗೆ ನೆಚ್ಚಿನ ಪ್ರಾಣಿಯೂ ಆಗಿದೆ. ಮುಂದಿನ ವಾರ ಮಹಾರಾಷ್ಟ್ರದ ಅರಣ್ಯ ಇಲಾಖೆಯ ಸಚಿವರಾದ ಸುಧೀರ್ ಮುಂಗಂತಿವರ್‍ ಉದ್ಧವ್ ಠಾಕ್ರೆ ಅವರ ನಿವಾಸಕ್ಕೆ ಭೇಟಿ ನೀಡಲಿದ್ದು ಉದ್ಧವ್ ಠಾಕ್ರೆಗೆ ಉಡುಗೊರೆಯನ್ನು ನೀಡಲಿದ್ದಾರೆ.
ಉದ್ಧವ್ ಠಾಕ್ರೆ ಅವರಿಗೆ ಹುಲಿಯ ಪ್ರತಿಕೃತಿಯನ್ನು ನೀಡುತ್ತಿರುವುದನ್ನು ಖಚಿತಪಡಿಸಿರುವ ಸುಧೀರ್ ಮುಂಗಂತಿವರ್‍, ಇದೊಂದು ಸ್ನೇಹ ಸೂಚಕ ಉಡುಗೊರೆಯಷ್ಟೆ ಇದಕ್ಕೆ ರಾಜಕೀಯ ಅರ್ಥಗಳನ್ನು ಕಲ್ಪಿಸಬೇಡಿ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶಿವಸೇನೆ ಮುಖಂಡರೊಬ್ಬರು, ಮಿತ್ರಪಕ್ಷಗಳ ಬಗ್ಗೆ ಬಿಜೆಪಿ ಅದರ ನಿಲುವು ಬದಲಿಸಿಕೊಳ್ಳಬೇಕು, ಬಿಜೆಪಿಯೊಂದಿಗೆ ಉದ್ಧವ್ ಠಾಕ್ರೆ ಸೈದ್ಧಾಂತಿಕ ವೈರತ್ವ ಹೊಂದಿಲ್ಲ. ಕೆಲವು ವಿಷಯಗಳಲ್ಲಿ ಬಿಜೆಪಿಯ ನಿಲುವುಗಳನ್ನು ಪ್ರಶ್ನೆ ಮಾಡುತ್ತಾರಷ್ಟೆ. ಅದನ್ನು ಬಿಜೆಪಿ ಸರಿಪಡಿಸಿಕೊಂಡರೆ ಯಾವುದೇ ಉಡುಗೊರೆ ಇಲ್ಲದೇ ಉದ್ಧವ್ ಠಾಕ್ರೆ ಸಂತಸಗೊಳ್ಳುತ್ತಾರೆ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com