ನವದೆಹಲಿ: ದೆಹಲಿ ಮುನಿಸಿಪಲ್ ಕಾರ್ಪೊರೇಶನ್ನ ಶುಚಿತ್ವ ನಿರ್ವಹಣೆಯ ಪೌರ ಸಿಬ್ಬಂದಿ ಕೈಗೊಂಡಿರುವ ಮುಷ್ಕರ 3ನೇ ದಿನಕ್ಕೆ ಕಾಲಿಟ್ಟಿದೆ.
3 ತಿಂಗಳಿಂದ ಬಾಕಿ ಇರುವ ಸಂಬಳವನ್ನು ಶೀಘ್ರವಾಗಿ ಪಾವತಿಸುವಂತೆ ಆಗ್ರಹಿಸಿ ಕಾರ್ಮಿಕರು ಮುಷ್ಕರ ನಡೆಸುತ್ತಿದ್ದಾರೆ. ಕಾರ್ಮಿಕರ ಮುಷ್ಕರದಿಂದ ಮಹಾನಗರದ ರಸ್ತೆಗಳಲ್ಲಿ, ಎಲ್ಲೆಂದರಲ್ಲಿ ರಾಶಿ ರಾಶಿ ಕಸ ಬಿದ್ದಿದ್ದು ದುರ್ನಾತ ಬೀರುತ್ತಿದೆ.
ನಿನ್ನೆ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಅಧಿಕೃತ ನಿವಾಸದ ಮುಂದೆ ಕಸದ ರಾಶಿ ಹಾಕಿ ಕಾರ್ಮಿಕರು ಪ್ರತಿಭಟನೆ ನಡೆಸಿದ್ದರು.
ದೆಹಲಿ ಸರ್ಕಾರ ಈಗಾಗಲೇ ಎಂಸಿಡಿ ಪೌರ ಕಾರ್ಮಿಕರ ಸಂಬಳ ಪಾವತಿಗೆ ಬೇಕಿರುವಷ್ಟು ಹಣವನ್ನು ನೀಡಿದ್ದು, ಆದರೆ ಪೌರ ಕಾರ್ಮಿಕ ಇಲಾಖೆ ಇನ್ನೂ ಹಣವನ್ನು ಬಿಡುಗಡೆ ಮಾಡಿಲ್ಲ ಎಂದು ಉಪಮುಖ್ಯಮಂತ್ರಿ ಸಿಸೋಡಿಯಾ ತಿಳಿಸಿದ್ದಾರೆ
Advertisement