ಸೌಹಾರ್ದ ಚರ್ಚೆ ಸ್ಥಾಪನೆಗೆ ಸರ್ವಭಾಷಾ ಸಂವಾದ ಶುರು

ದೇಶದಲ್ಲಿ ಸೌಹಾರ್ದಯುತ ಸಾರ್ವಜನಿಕ ಚರ್ಚೆಯನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಗುಜರಾತ್ ನ ನವಸಾರಿಯಲ್ಲಿ ಹೊಸ ವೇದಿಕೆಯೊಂದು...
ಗೋವಿಂದ ಪಾನ್ಸರೆ- ನರೇಂದ್ರ ದಾಭೋಲ್ಕರ್- ಎಂ ಎಂ ಕಲಬುರ್ಗಿ
ಗೋವಿಂದ ಪಾನ್ಸರೆ- ನರೇಂದ್ರ ದಾಭೋಲ್ಕರ್- ಎಂ ಎಂ ಕಲಬುರ್ಗಿ
Updated on
ಅಹಮದಾಬಾದ್: ದೇಶದಲ್ಲಿ ಸೌಹಾರ್ದಯುತ ಸಾರ್ವಜನಿಕ ಚರ್ಚೆಯನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಗುಜರಾತ್ ನ ನವಸಾರಿಯಲ್ಲಿ ಹೊಸ ವೇದಿಕೆಯೊಂದು ಆರಂಭವಾಗಿದೆ. 
ಹುತಾತ್ಮ ದಿನದ ಹಿನ್ನೆಲೆಯಲ್ಲಿ ಶನಿವಾರ ಸುಮಾರು 500ರಷ್ಟು ಸಾಹಿತಿಗಳು, ಲೇಖಕರು ಹಾಗೂ ಕಲಾವಿದರು ಈ "ಸರ್ವಭಾಷಾ ಸಂವಾದ"ಕ್ಕೆ ಚಾಲನೆ ನೀಡಿದ್ದಾರೆ.
ವಿಶೇಷವೆಂದರೆ, ಹತ್ಯೆಗೀಡಾದ ವಿಚಾರವಾದಿಗಳಾದ ಕರ್ನಾಟಕದ ಎಂ ಎಂ ಕಲಬುರ್ಗಿ, ಮಹಾರಾಷ್ಟ್ರದ ಗೋವಿಂದ ಪಾನ್ಸರೆ, ನರೇಂದ್ರ ದಾಭೋಲ್ಕರ್ ಅವರ ಕುಟುಂಬ ಸದಸ್ಯರೂ ಇದರಲ್ಲಿ ಪಾಲ್ಗೊಂಡಿದ್ದರು.
ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಲು ಅಹಿಂಸಾತ್ಮಕ ಮಾರ್ಗವನ್ನು ಆರಂಭಿಸುವುದೇ ಈ ರಾಜಕೀಯೇತರ ಸಮಾವೇಶದ ಉದ್ದೇಶವಾಗಿದ್ದು, ಡಾ.ಗಣೇಶ್ ದೇವಿ ನೇತೃತ್ವದಲ್ಲಿ ಈ ಕಾರ್ಯಕ್ರಮ ಆರಂಭವಾಗಿದೆ. ಇಲ್ಲಿ ಸೇರಿದ್ದ ಸಾಹಿತಿಗಳು ದಂಡಿಯತ್ತ ಪ್ರಯಾಣ ಬೆಳೆಸುತ್ತಿದ್ದಾಗ ಪೊಲೀಸರು ತಡೆದ ಹಿನ್ನೆಲೆಯಲ್ಲಿ ಅವರು ನವಸಾರಿ ಕೃಷಿ ವಿಶ್ವವಿದ್ಯಾಲಯದ ಆಡಿಟೋರಿಯಂನಲ್ಲಿ ಸೇರಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com