ಉತ್ತರ ಪ್ರದೇಶ: ಬಂಧಿಸಲು ಹೋದ ಹರ್ಯಾಣ ಪೊಲೀಸ್ ಅಧಿಕಾರಿಯನ್ನೇ ದೋಚಿದ ಕಳ್ಳರು!

ಮೂರು ಜನ ಶಂಕಿತ ಕಳ್ಳರನ್ನು ಪ್ರಶ್ನಿಸಲು ಹೋದ ಹರ್ಯಾಣದ ಪೊಲೀಸ್ ಇನ್ಸ್ಪೆಕ್ಟರ್ ನ್ನೇ ಕಳ್ಳರು ದೋಚಿರುವ ಘಟನೆ ಉತ್ತರ ಪ್ರದೇಶ- ಹರ್ಯಾಣ ಗಡಿ ಭಾಗದಲ್ಲಿ ನಡೆದಿದೆ.
ಉತ್ತರ ಪ್ರದೇಶ
ಉತ್ತರ ಪ್ರದೇಶ

ಮಥುರಾ: ಮೂರು ಜನ ಶಂಕಿತ ಕಳ್ಳರನ್ನು ಬಂಧಿಸಲು ಹೋದ ಹರ್ಯಾಣದ ಪೊಲೀಸ್ ಇನ್ಸ್ಪೆಕ್ಟರ್ ನ್ನೇ ಕಳ್ಳರು ದೋಚಿರುವ ಘಟನೆ ಉತ್ತರ ಪ್ರದೇಶ- ಹರ್ಯಾಣ ಗಡಿ ಭಾಗದಲ್ಲಿ ನಡೆದಿದೆ.

ಗುರ್ಗಾಂವ್ ನ ಇನ್ಸ್ ಪೆಕ್ಟರ್ ಸುರೇಂದ್ರ ಮೂವರು ಕಳ್ಳರ ಬಗ್ಗೆ ಮಾಹಿತಿ ಪಡೆದು ಅವರನ್ನು ವಿಚಾರಣೆ ನಡೆಸಲು ತೆರಳಿದ್ದಾರೆ. ಈ ವೇಳೆ ಕಳ್ಳರೇ ಪೊಲೀಸ್ ಇನ್ಸ್ ಪೆಕ್ಟರ್ ಬಳಿ ಇದ್ದ ವಸ್ತುಗಳನ್ನು ದೋಚಿದ್ದಾರೆ. ಕಳ್ಳರನ್ನು ಬಂಧಿಸಿ ಪೊಲೀಸ್ ಠಾಣೆಯತ್ತ ಕಾರು ಚಲಾಯಿಸುತ್ತಿದ್ದ ವೇಳೆ ಮಾರ್ಗ ಮಧ್ಯದಲ್ಲಿ ಈ ಘಟನೆ ನಡೆದಿದ್ದು ದೋಚಿದ್ದಷ್ಟೇ ಅಲ್ಲದೆ ಇನ್ಸ್ ಪೆಕ್ಟರ್ ಮೇಲೆಯೇ ಹಲ್ಲೆ ನಡೆಸಿದ್ದಾರೆ ಎಂದು ಮಥುರಾ ಎಸ್ ಪಿ ಅರುಣ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದಾರೆ.

ಕಳ್ಳರು ತಮ ಮೇಲೆ ಹಲ್ಲೆ ನಡೆಸಿದ ಬೆನ್ನಲ್ಲೇ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಈ ಮಾಹಿತಿಯನ್ನು ಸುರೇಂದ್ರ ಅವರು ಕಾರ್ಯನಿರ್ವಹಿಸುತ್ತಿದ್ದ ಪೊಲೀಸ್ ಠಾಣೆಗೆ ರವಾನಿಸಲಾಗಿದೆ, ನಂತರ ಪೊಲೀಸ್ ಠಾಣೆಯವರು ಇನ್ಸ್ ಪೆಕ್ಟರ್ ಸುರೇಂದ್ರ ಅವರನ್ನು ಕರೆದೊಯ್ದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com