ಶಿಕ್ಷಕರಿಂದ ಕಿತ್ತುಕೊಂಡ ಹಣವನ್ನು ಪಿಂಕುಶ್ ಎರಡು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಖಾತೆಗಳಲ್ಲಿ ಠೇವಣಿ ಇಡುತ್ತಿದ್ದ. ಅದನ್ನು ನಾಗಲ್ಯಾಂಡ್ ನಲ್ಲಿ ಗಡಿ ಮಯನ್ಮಾರ್ ನಲ್ಲಿ ಹಣ ತೆಗೆಯಲಾಗುತ್ತಿತ್ತು. ತೆರಂಗಾ ಎನ್ ಡಿಎಫ್ ಬಿಗೆ 2013ರಲ್ಲಿ ಸೇರುವ ಮುನ್ನ ಅಸ್ಸಾಂನ ಚಿರಂಗ್ ಜಿಲ್ಲೆಯಲ್ಲಿ ಕಾಲೇಜು ಉಪನ್ಯಾಸಕನಾಗಿದ್ದ. ಎನ್ ಡಿಎಫ್ ಬಿಗೆ ಸೇರಿದ ಕೆಲವೇ ದಿನಗಳಲ್ಲಿ ಅದರ ಪ್ರಧಾನ ಕಾರ್ಯದರ್ಶಿಯಾದ. ನಂತರ ಆ ಬಣದ ಮುಖ್ಯ ಕಮಾಂಡರ್ ಇನ್ ಚೀಫ್ ಆದ ಎಂದು ಬಿಶ್ನೊಯಿ ತಿಳಿಸಿದ್ದಾರೆ.