ಸ್ವಾತಿ ಕೊಲೆ ಆರೋಪಿ ರಾಮ್ ಕುಮಾರ್ ಆರೋಗ್ಯದಲ್ಲಿ ಸುಧಾರಣೆ

ಇನ್ಫೋಸಿಸ್ ಉದ್ಯೋಗಿ ಸ್ವಾತಿ ಕೊಲೆ ಆರೋಪಿ ಪಿ.ರಾಮ್ ಕುಮಾರ್ ನಗರದ ಸರ್ಕಾರಿ ರೋಯಪೆಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆ ...
ಚೆನ್ನೈಯ ಸರ್ಕಾರಿ ರೊಯಪೆಟ್ಟ ಆಸ್ಪತ್ರೆಗೆ ಸ್ವಾತಿ ಕೊಲೆ ಆರೋಪಿ ಪಿ.ರಾಮ್ ಕುಮಾರ್ ನನ್ನು ಪೊಲೀಸರ ಭದ್ರತೆ ನಡುವೆ ಕರೆತರುತ್ತಿರುವುದು.
ಚೆನ್ನೈಯ ಸರ್ಕಾರಿ ರೊಯಪೆಟ್ಟ ಆಸ್ಪತ್ರೆಗೆ ಸ್ವಾತಿ ಕೊಲೆ ಆರೋಪಿ ಪಿ.ರಾಮ್ ಕುಮಾರ್ ನನ್ನು ಪೊಲೀಸರ ಭದ್ರತೆ ನಡುವೆ ಕರೆತರುತ್ತಿರುವುದು.
ಚೆನ್ನೈ: ಇನ್ಫೋಸಿಸ್ ಉದ್ಯೋಗಿ ಸ್ವಾತಿ ಕೊಲೆ ಆರೋಪಿ ಪಿ.ರಾಮ್ ಕುಮಾರ್ ನಗರದ ಸರ್ಕಾರಿ ರೋಯಪೆಟ್ಟ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕೋಟೆಗೆ ಸರ್ಪಗಾವಲು ರೀತಿಯಲ್ಲಿ ನಿನ್ನೆ ಆಸ್ಪತ್ರೆಯ ಸುತ್ತ ನೂರಕ್ಕೂ ಹೆಚ್ಚು ಪೊಲೀಸರು ಭದ್ರತೆಯ ವಿಷಯದಲ್ಲಿ ಸುತ್ತುವರಿದಿದ್ದರು.
ಇದರಿಂದ ಆಸ್ಪತ್ರೆಗೆ ಸಾಮಾನ್ಯವಾಗಿ ಖಾಯಿಲೆಗೆ ಬರುತ್ತಿದ್ದ ರೋಗಿಗಳಿಗೆ ತೊಂದರೆಯಾಗಿತ್ತು. ಭಾರೀ ಸಂಖ್ಯೆಯಲ್ಲಿ ಪೊಲೀಸರು, ಮಾಧ್ಯಮ ಪ್ರತಿನಿಧಿಗಳ ಜಂಗುಳಿಯಿಂದಾಗಿ ಕೆಲ ರೋಗಿಗಳು ಆಸ್ಪತ್ರೆಯಲ್ಲಿ ಉಳಿದುಕೊಳ್ಳಲಾಗದೆ ಡಿಸ್ಚಾರ್ಜ್ ಮಾಡಿಸಿಕೊಳ್ಳಲು ಯೋಚಿಸುತ್ತಿದ್ದರು.
ಇಷ್ಟಕ್ಕೆಲ್ಲಾ ಕಾರಣನಾದ ಆರೋಪಿ ರಾಮ್ ಕುಮಾರ್ ನನ್ನು ಆಸ್ಪತ್ರೆಯ ಪ್ರತ್ಯೇಕ ತೀವ್ರ ಕಷ್ಟ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಆತನ ಆರೋಗ್ಯದಲ್ಲಿ ಸೋಮವಾರ ಸುಧಾರಣೆ ಕಂಡುಬಂದಿದ್ದು, ಘನ ಆಹಾರಗಳನ್ನು ಸೇವಿಸುವ ಸ್ಥಿತಿಗೆ ಮರಳಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ. ರಾಮ್ ಕುಮಾರ್ ಆಸ್ಪತ್ರೆಯಲ್ಲಿ ಇದ್ದುದರಿಂದಾಗಿ ನಿನ್ನೆ ಆಸ್ಪತ್ರೆಗೆ ಬಂದು ಹೋಗುತ್ತಿದ್ದವರನ್ನು ತಪಾಸಣೆ ನಡೆಸಿಯೇ ಬಿಡಲಾಗುತ್ತಿತ್ತು. ತೀವ್ರ ಭದ್ರತೆ ಕಂಡು ರೋಗಿಗಳು ಮತ್ತು ಅವರ ಕಡೆಯವರು ಗಾಬರಿಗೀಡಾಗಿದ್ದು ಸುಳ್ಳಲ್ಲ. 
ರಾಮ್ ಕುಮಾರ್ ನನ್ನು ನಿನ್ನೆ ಮುಂಜಾನೆ 4.30ರ ಸುಮಾರಿಗೆ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಕರೆತರಲಾಗಿತ್ತು. ಇಂದು ಕೈದಿಗಳ ವಾರ್ಡ್ ಗೆ ವರ್ಗಾಯಿಸುವ ಸಾಧ್ಯತೆಯಿದೆ. ಜುಲೈ 18ರವರೆಗೆ ರಾಮ್ ಕುಮಾರ್ ನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗುತ್ತದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com