ಚೆನ್ನೈಗೆ ಬರಲು ಸ್ವಾತಿ ಹೇಳಿದ್ದಳು: ಕೊಲೆ ಆರೋಪಿ ರಾಮ್ ಕುಮಾರ್

ಇನ್ ಫೋಸಿಸ್ ಟೆಕ್ಕಿ ಸ್ವಾತಿ ಕೊಲೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಶಂಕಿತ ಆರೋಪಿ ರಾಮ್ ಕುಮಾರ್ ಸ್ವಾತಿಯೇ ನನ್ನನ್ನು ಚೆನ್ನೈಗೆ ...
ಆರೋಪಿ ರಾಮ್ ಕುಮಾರ್
ಆರೋಪಿ ರಾಮ್ ಕುಮಾರ್
Updated on

ಚೆನ್ನೈ: ಇನ್ ಫೋಸಿಸ್ ಟೆಕ್ಕಿ ಸ್ವಾತಿ ಕೊಲೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಶಂಕಿತ ಆರೋಪಿ ರಾಮ್ ಕುಮಾರ್ ಸ್ವಾತಿಯೇ ನನ್ನನ್ನು ಚೆನ್ನೈಗೆ ಬರುವಂತೆ ಕರೆದಿದ್ದಳು ಎಂದು ಹೇಳಿದ್ದಾನೆ.

ಆರೋಪಿ ರಾಮ್ ಕುಮಾರ್ ಪರ ವಕಾಲತ್ತು ವಹಿಸಿಕೊಂಡಿರುವ ನಿವೃತ್ತ ಜಿಲ್ಲಾ ನ್ಯಾಯಾಧೀಶ ಹಾಗೂ ವಕೀಲ ವೃತ್ತಿ ನಡೆಸುತ್ತಿರುವ 60 ವರ್ಷದ ಎಸ್ ಪಿ ರಾಮ್ ರಾಜ್ ಜೈಲಿನಲ್ಲಿ ಆರೋಪಿಯನ್ನು ಭೇಟಿ ಮಾಡಿದ ನಂತರ, ಸ್ವಾತಿಯೇ ಚೆನ್ನೈಗೆ ಬರುವಂತೆ ರಾಮ್ ಕುಮಾರ್ ನನ್ನು ಕರೆದಿದ್ದಳು ಎಂದು ಹೇಳಿದ್ದಾರೆ.

ಆದರೆ ಪೊಲೀಸರು ವಕೀಲ ರಾಮ್ ರಾಜ್ ಅವರ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ. ಸ್ವಾತಿ ಮತ್ತು ರಾಮ್ ಕುಮಾರ್ ನಡುವೆ ಯಾವುದೇ ಫೋನ್ ಸಂಭಾಷಣೆಯಾಗಲಿ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಸಂಭಾಷಣೆಯಾಗಲಿ ನಡೆದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ಇನ್ನೂ ಈ ಸಂಬಂಧ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿರುವ ವಕೀಲ ರಾಮ್ ರಾಜ್. ಪೊಲೀಸರು ಬಿಡುಗಡೆ ಮಾಡಿರುವ ಸಿಸಿಟಿವಿ ದೃಶ್ಯದಲ್ಲಿ ಇರುವ ವ್ಯಕ್ತಿ ರಾಮ್ ಕುಮಾರ್ ಅಲ್ಲಾ. ಆತನಿಗೆ ಬೈಕ್ ಓಡಿಸಲು ಬರುವುದಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ರಾಮ್ ಕುಮಾರ್ ಬಂಧನವಾದ ದಿನದಿಂದ ಪೊಲೀಸರು ಆತನ ಕುಟುಂಬಕ್ಕೆ ಕಿರುಕುಳ ನೀಡುತ್ತಿದ್ದಾರೆ. ನಾನು ಅವರ ಕುಟುಂಬವನ್ನು ಭೇಟಿ ಮಾಡಲು ಬಿಡುತ್ತಿಲ್ಲ, ಜೊತೆಗೆ ಕಾರಾಗೃಹ ಅಧಿಕಾರಿಗಳು ಸಹ ನಾನು ರಾಮ್ ಕುಮಾರ್ ಅವರನ್ನು ಭೇಟಿ ಮಾಡಲು ನಿರಾಕರಿಸಿತ್ತು ಎಂದು ಅವರು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com