ಗೋರಕ್ ಪುರ: ಬಿಜೆಪಿ ಫೈರ್ ಬಾಂಡ್ ಖ್ಯಾತಿಯ ಸಂಸದ ಯೋಗಿ ಆದಿತ್ಯನಾಥ್ ಅವರನ್ನು ಜಿಲ್ಲಾ ಅಲ್ಪಾಸಂಖ್ಯಾತ ಘಟಕ ಆಂಜನೇಯನಂತೆ ಚಿತ್ರಿಸಿ ಪೋಸ್ಟರ್ ಹಾಕಿದೆ.
ಆಂಜನೇಯ ಸಂಜೀವಿನಿ ಪರ್ವತ ಹೊತ್ತಿರುವಂತೆ ಯೋಗಿ ಆದಿತ್ಯನಾಥ್ ಕೈಯ್ಯಲ್ಲಿ ರಾನ ದೇವಾಲಯ ಹೊತ್ತು ಹಾರುತ್ತಿರುವ ಪೋಸ್ಟರ್ ಅನ್ನು ಬಿಡುಗೆ ಮಾಡಿದೆ.
2017 ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ರಂಜಾನ್ ಸಂದರ್ಭದಲ್ಲಿ ಬಿಜೆಪಿ ಅಲ್ಪ ಸಂಖ್ಯಾತ ಘಟಕ ಈ ಪೋಸ್ಟರ್ ತಯಾರಿಸಿದೆ.ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅಲ್ಪ ಸಂಖ್ಯಾತರು ಹೆಚ್ಚಿನ ಕೊಡುಗೆ ನೀಡಬೇಕು ಎನ್ನುವ ಸಂದೇಶ ಸಾರುತ್ತಿದೆ ಈ ಪೋಸ್ಟರ್ .
ಇತ್ತೀಚೆಗೆ ಮೋದಿ ನಡೆಸಿದ ಸಂಪುಟ ಪುನಾರಚನೆಯಲ್ಲಿ ಯೋಗಿ ಆದಿತ್ಯನಾಥ್ ಗೆ ಸ್ಥಾನ ನೀಡಿಲ್ಲ, ಆದರೂ ಬಿಜೆಪಿಯ ಹಿರಿಯ ಸಂಸದರು ಮೌನ ವಹಿಸಿದ್ದಾರೆ.
Advertisement