ಮದನ್ ಬಿ. ಲೋಕೂರ್ ಮತ್ತು ಆರ್.ಕೆ.ಅಗರ್ವಾಲ್ ಅವರನ್ನೊಳಗೊಂಡ ಪೀಠ, ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದೆ. ಸಂವಿಧಾನದ ಪರಿಚ್ಛೇದ 32ನ್ನು ಉಲ್ಲೇಖಿಸಿದ ನ್ಯಾಯಪೀಠ, ಮಣಿಪುರದಲ್ಲಿ ನಡೆದ ಸೇನಾಪಡೆ ಮತ್ತು ಪೊಲೀಸರನ್ನೊಳಗೊಂಡ ನಕಲಿ ಎನ್ ಕೌಂಟರ್ ಪ್ರಕರಣಗಳಲ್ಲಿ ಮುಗ್ಧ, ಅಮಾಯಕ ನಾಗರಿಕರು ಸಾವನ್ನಪ್ಪಿರುವ ಪ್ರಕರಣದ ವಿಚಾರಣೆ ನಡೆಸಿ ಈ ತೀರ್ಪು ನೀಡಿದೆ.