ಅವರು ಪ್ರಖ್ಯಾತ ಬದರೀನಾಥ್ ಕೇದಾರನಾಥ್ ದೇವಸ್ಥಾನ ಸಮಿತಿಯ ಉಸ್ತುವಾರರಾಗಿದ್ದು, ಉತ್ತರಾಖಂಡ ಮೂಲದವರು. ಶ್ಲೋಕ, ದೇವರನಾಮ ಗೊತ್ತಿರುವ ಯಾತ್ರಿಕರನ್ನು ಬಹಳ ಆತ್ಮೀಯವಾಗಿ ಕಾಣುತ್ತಾರೆ. ಅವರ ಪ್ರಕಾರ ಬದರಿನಾಥ, ಕೇದಾರನಾಥ ದೇವಾಲಯಗಳಿಗೆ ದಕ್ಷಿಣದ ರಾಜ್ಯಗಳಿಂದ ತೆಲಂಗಾಣ, ಆಂಧ್ರ ಪ್ರದೇಶ, ಕೇರಳಗಳಿಂದ ಶೇಕಡಾ 85ರಷ್ಟು ಮಂದಿ ಯಾತ್ರಿಕರು ಪ್ರತಿವರ್ಷ ಭೇಟಿ ನೀಡುತ್ತಾರಂತೆ. ವರ್ಷದಿಂದ ವರ್ಷಕ್ಕೆ ದಕ್ಷಿಣದ ರಾಜ್ಯಗಳಿಂದ ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎನ್ನುತ್ತಾರೆ ಅವರು.