ಯೌವ್ವನದಲ್ಲಿ ಸಾಕಷ್ಟು ತಪ್ಪುಗಳನ್ನು ಮಾಡಿದ್ದ ರಶೀದ್ ಇಳಿವಯಸ್ಸಿನಲ್ಲಿ ಪತ್ನಿಯ ನೆನಪಾಗಿ ನಿಮ್ಮ ಅಮ್ಮ ಹೈದರಾಬಾದ್ ನಲ್ಲಿದ್ದಾಳೆ ಎಂದು 2001ರಲ್ಲಿ ಹೇಳಿದ್ದ. ಆದರೆ ಸಹೋದರಿಯರು ತಮ್ಮ ಅಮ್ಮನನ್ನು ಹುಡುಕುವ ಗೋಜಿಗೆ ಹೋಗಿರಲಿಲ್ಲ. ಅವರಿಗೆ ನಂತರ ಮದುವೆಯಾಯಿತು. ಮದುವೆಯಾದ ಮೇಲೆ ಧೈರ್ಯ ಮಾಡಿ ಅಮ್ಮನನ್ನು ಹುಡುಕಬೇಕೆಂದು ಹೈದರಾಬಾದಿಗೆ ಬಂದರು. ಮೊದಲ ಪ್ರಯತ್ನ ಫಲ ಕೊಡಲಿಲ್ಲ. ಎರಡನೇ ಸಲ ಕಳೆದ ಜನವರಿಯಲ್ಲಿ ಹೈದರಾಬಾದ್ ದಕ್ಷಿಣ ವಲಯದ ಡಿಸಿಪಿ ವಿ.ಸತ್ಯನಾರಾಯಣ ಅವರನ್ನು ಭೇಟಿ ಮಾಡಿ ತಮ್ಮ ಅಮ್ಮನ ಫೋಟೋ, ಮದುವೆ ಸರ್ಟಿಫಿಕೇಟ್ ಮತ್ತು ಪಾಸ್ ಪೋರ್ಟ್ ನ ಹಳೆಯ ದಾಖಲೆಗಳನ್ನು ನೀಡಿದರು.