ರಂಜಾನ್ ಗಾಗಿ ಸಿಎಂ ಜಯಲಲಿತಾರಿಂದ ಮಸೀದಿಗೆಅಕ್ಕಿ ಭಾಗ್ಯ

ರಂಜಾನ್ ಹಬ್ಬಕ್ಕೆ ಮುಖ್ಯಮಂತ್ರಿ ಜಯಲಲಿತಾ ಬಂಪರ್ ಕೊಡುಗೆ ನೀಡಿದ್ದಾರೆ. ರಂಜಾನ್ ಅವಧಿಯಲ್ಲಿ ಮಸೀದಿಗಳಿಗೆ ಉಚಿತ ಅಕ್ಕಿ ನೀಡುವುದಾಗಿ ಪ್ರಕಟಿಸಿದ್ದಾರೆ...
ಜಯಲಲಿತಾ
ಜಯಲಲಿತಾ
Updated on

ಚೆನ್ನೈ: ರಂಜಾನ್ ಹಬ್ಬಕ್ಕೆ ಮುಖ್ಯಮಂತ್ರಿ ಜಯಲಲಿತಾ ಬಂಪರ್ ಕೊಡುಗೆ ನೀಡಿದ್ದಾರೆ. ರಂಜಾನ್ ಅವಧಿಯಲ್ಲಿ ಮಸೀದಿಗಳಿಗೆ ಉಚಿತ ಅಕ್ಕಿ ನೀಡುವುದಾಗಿ ಪ್ರಕಟಿಸಿದ್ದಾರೆ.

3,000 ಮಸೀದಿಗಳಿಗೆ ಒಟ್ಟು 4,600 ಟನ್ ಅಕ್ಕಿಯನ್ನು ಬಿಡುಗಡೆ ಮಾಡುವುದಾಗಿ ಜಯಲಲಿತಾ ತಿಳಿಸಿದ್ದಾರೆ. ಈ ಕುರಿತು ಮಾತನಾಡಿದ ಜಯಲಲಿತಾ ಈ ಯೋಜನೆಯನ್ನು ನಮ್ಮ ಸರ್ಕಾರ 2001ರಿಂದಲೇ ಆರಂಭ ಮಾಡಿದೆ.3000 ಮಸೀದಿಗಳು ಈ ಯೋಜನೆಯ ಫಲಾನುಭವಿಗಳಾಗಿದ್ದು, ಉತ್ತಮ ದರ್ಜೆಯ ಅಕ್ಕಿ ಮುಸ್ಲಿಮ ಬಾಂಧವರಿಗೆ ಸಿಗುವಂತೆ ಜಿಲ್ಲಾಧಿಕಾರಿಗಳು ನೋಡಿಕೊಳ್ಳಬೇಕು ಎಂದು ಸೂಚಿಸಿದ್ದಾರೆ.

ಉಚಿತವಾಗಿಯೇ ಅಗತ್ಯ ವಸ್ತುಗಳನ್ನು ನೀಡುವ ಮೂಲಕ ಸತತ ಎರಡನೇ ಬಾರಿ ಅಧಿಕಾರಕ್ಕೆ ಬಂದಿರುವ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಉಚಿತ ವಿತರಣೆ ಯೋಜನೆಯನ್ನು ಮುಂದುವರಿಸಿದ್ದಾರೆ. .

ಮುಂದಿನ ವಾರದಿಂದ ಆರಂಭವಾಗುವ ರಂಜಾನ್‌ ಮಾಸಾಚರಣೆ ಹಿನ್ನೆಲೆಯಲ್ಲಿ ಅಕ್ಕಿ ವಿತರಿಸಬೇಕೆಂದು ತಮಿಳುನಾಡು ಸರಕಾರ ಆದೇಶಿಸಿದೆ. ರಂಜಾನ್‌ ಆಚರಣೆಗೆ ಅಕ್ಕಿ ವಿತರಿಸುವಂತೆ ಮುಸ್ಲಿಂ ಬಾಂಧವರು ಆಗ್ರಹಿಸಿದ ಹಿನ್ನೆಲೆಯಲ್ಲಿ ಸರಕಾರ ಈ ಕ್ರಮ ಕೈಗೊಳ್ಳಲು ಮುಂದಾಗಿದೆ. ರಾಜ್ಯದಲ್ಲಿರುವ 3 ಸಾವಿರ ಮಸೀದಿಗಳಿಗೆ ಸುಮಾರು 4,600 ಟನ್‌ ಅಕ್ಕಿ ವಿತರಿಸುವಂತೆ ಸಿಎಂ ಕಚೇರಿ ಹೊರಡಿಸಿರುವ ಆದೇಶ ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com