ಹಿಂದೂಗಳ ಸಾಮೂಹಿಕ ವಲಸೆಗೆ ಕಾರಣ ತಿಳಿಯಲು ಕೈರಾನ ತಲುಪಿದ ಬಿಜೆಪಿ ಸಮಿತಿ

ಉತ್ತರ ಪ್ರದೇಶದ ಕೈರಾನದಲ್ಲಿ ಹಿಂದೂ ಕುಟುಂಬಗಳ ಸಾಮೂಹಿಕ ವಲಸೆ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ ರಚಿಸಿದ್ದ 9 ಸದಸ್ಯರ ಸಮಿತಿ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದೆ.
ಹಿಂದೂಗಳ ಸಾಮೂಹಿಕ ವಲಸೆಗೆ ಕಾರಣ ತಿಳಿಯಲು ಕೈರಾನ ತಲುಪಿದ ಬಿಜೆಪಿ ಸಮಿತಿ
ಹಿಂದೂಗಳ ಸಾಮೂಹಿಕ ವಲಸೆಗೆ ಕಾರಣ ತಿಳಿಯಲು ಕೈರಾನ ತಲುಪಿದ ಬಿಜೆಪಿ ಸಮಿತಿ

ಕೈರಾನ: ಉತ್ತರ ಪ್ರದೇಶದ ಕೈರಾನದಲ್ಲಿ ಹಿಂದೂ ಕುಟುಂಬಗಳ ಸಾಮೂಹಿಕ ವಲಸೆ ವಿಷಯಕ್ಕೆ ಸಂಬಂಧಿಸಿದಂತೆ ಬಿಜೆಪಿ ರಚಿಸಿದ್ದ 9 ಸದಸ್ಯರ ಸಮಿತಿ ಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದೆ. ಹಿಂದೂ ಕುಟುಂಬಗಳ ಸಾಮೂಹಿಕ ವಲಸೆ ವಿಷಯದ ಬಗ್ಗೆ ಕೇಂದ್ರ ಗೃಹ ಇಲಾಖೆ ಉತ್ತರ ಪ್ರದೇಶ ಸರ್ಕಾರದಿಂದ ವಿಸ್ತೃತ ವರದಿ ಕೇಳಿದ ಬೆನ್ನಲೇ ಬಿಜೆಪಿ ರಚಿಸಿದ್ದ 9 ಸದಸ್ಯರ ಸಮಿತಿ ಕೈರಾನ ಗೆ ಭೇಟಿ ನೀಡಿದ್ದು ಹಿಂದೂ ಕುಟುಂಬಗಳ ಸಾಮೂಹಿಕ ವಲಸೆಗೆ ಕಾರಣವಾಗಿರುವ ಅಂಶಗಳನ್ನು ಪತ್ತೆ ಮಾಡಲು ಮುಂದಾಗಿದೆ.

ಉತ್ತರ ಪ್ರದೇಶದ ಅಲಹಾಬಾದ್ ನಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಕೈರಾನ ಸಾಮೂಹಿಕ ವಲಸೆಯ ವಿಚಾರವನ್ನು ಪ್ರಸ್ತಾಪಿಸಲಾಗಿತ್ತು. ಇದರ ಬೆನ್ನಲ್ಲೇ ಜೂ.14 ರಂದು ಬಿಜೆಪಿ ಹೊಸದಾಗಿ ವಲಸೆ ಹೋಗಿರುವ ಹಿಂದೂ ಕುಟುಂಬಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಮುಸ್ಲಿಮರು ಬಹುಸಂಖ್ಯಾತರಾಗಿರುವ ಕೈರಾನದಲ್ಲಿ ಸ್ಥಳಿಯ ಗೂಂಡಾಗಳ ಕಾಟ ಹೆಚ್ಚುತ್ತಿದ್ದು, ಮುಸ್ಲಿಂ ಕುಟುಂಬಗಳು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಕುಟುಂಬಗಳು ಸಾಮೂಹಿಕ ವಲಸೆ ಹೋಗುತ್ತಿವೆ ಎಂದು ಉತ್ತರ ಪ್ರದೇಶ ಬಿಜೆಪಿ ಮುಖಂಡ, ಸಂಸದ ಹುಕುಂ ಸಿಂಗ್ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ 9 ಸದಸ್ಯರ ಸಮಿತಿ ರಚಿಸಿದ್ದ ಬಿಜೆಪಿ ಹಿಂದು ಕುಟುಂಬಗಳ ಸಾಮೂಹಿಕ ವಲಸೆಗೆ ಕಾರಣವಾಗಿರುವ ಅಂಶಗಳ ಬಗ್ಗೆ ವರದಿ ನೀಡಲು ಸೂಚಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com