ಮೀರತ್ ನಲ್ಲಿ ತ್ರಿವಳಿ ಕೊಲೆ: ಇನ್ಷ್ಯೂರೆನ್ಸ್ ಕಂಪನಿ ಮ್ಯಾನೇಜರ್, ಪತ್ನಿ ಸೇರಿ ಮೂವರ ಹತ್ಯೆ

ಉತ್ತರ ಪ್ರದೇಶದ ಮೀರತ್ ನಲ್ಲಿ ಮೂವರನ್ನು ಹತ್ಯೆ ಮಾಡಲಾಗಿದೆ. ಇನ್ಷ್ಯೂರೆನ್ಸ್ ಕಂಪನಿ ಮ್ಯಾನೇಜರ್, ಅವರ ಪತ್ನಿ, ಮತ್ತೊಬ್ಬ ಅಪರಿಚಿತ ಮಹಿಳೆ ಶವ ..
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೀರತ್: ಉತ್ತರ ಪ್ರದೇಶದ ಮೀರತ್ ನಲ್ಲಿ ಮೂವರನ್ನು ಹತ್ಯೆ ಮಾಡಲಾಗಿದೆ.
ಇನ್ಷ್ಯೂರೆನ್ಸ್ ಕಂಪನಿ ಮ್ಯಾನೇಜರ್, ಅವರ ಪತ್ನಿ,  ಮತ್ತೊಬ್ಬ ಅಪರಿಚಿತ ಮಹಿಳೆ ಶವ ಪತ್ತೆಯಾಗಿದೆ.

ಶಾಸ್ತ್ರಿ ನಗರ ಪ್ರದೇಶದ ಮನೆಯಲ್ಲಿ 52 ವರ್ಷದ ಚಂದ್ರಶೇಖರ್ ಗುಪ್ತಾ ಮತ್ತವರ ಪತ್ನಿ ಪೂನಮ್ ಗುಪ್ತ ಹಾಗೂ 30 ವರ್ಷದ ಅಪರಿಚಿತ ಮಹಿಳೆ ಶವ ಪತ್ತೆಯಾಗಿದೆ.

ಅರಿತವಾದ ಆಯುಧಗಳಿಂದ ಚುಚ್ಚಲಾಗಿದೆ. ಡಿಐಜಿ ಲಕ್ಷ್ಮಿ ಸಿಂಗ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಬಿಜೆಪಿ ಸಂಸದ ರಾಜೇಂದ್ರ ಅಗರ್ ವಾಲ್ ಸ್ಥಳಕ್ಕೆ ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಇದುವರೆಗೂ ಕೊಲೆಯ ಹಿಂದಿನ ಉದ್ದೇಶ ತಿಳಿದು ಬಂದಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com