ಅಹ್ಮದಾಬಾದ್: ಶ್ರೀಕೃಷ್ಣ ಎಂದರೆ ದೇವರು, ಆದರೆ ಗುಜರಾತ್ ಸರ್ಕಾರದ ಅಧಿಕೃತ ವೆಬ್ ಸೈಟ್ನಲ್ಲಿ ಶ್ರೀಕೃಷ್ಣ ಸಾಹಿತಿಯಾಗಿದ್ದಾನೆ.
http:www.gujaratindia.com ಎಂಬ ವೆಬ್ಸೈಟ್ನಲ್ಲಿ ಸಾಧನೆ ಮಾಡಿದವರ ಪಟ್ಟಿಯಲ್ಲಿ ನೀಡಿದ ಮಾಹಿತಿಗಳಲ್ಲಿ ಇಂಥಾ ತಪ್ಪುಗಳು ನುಸುಳಿಕೊಂಡಿವೆ. ಶ್ರೀಕೃಷ್ಣ ಸಾಹಿತಿಯಾಗಿರುವುದು ಮಾತ್ರವಲ್ಲ ಭಾರತದ ಧೀರ ಯೋಧ ಸ್ಯಾಮ್ ಹಾರ್ಮುಸ್ಜಿ ಜೆಮ್ಶೆದ್ಜಿ ಮಾಣೆಕ್ ಶಾ ಅವರನ್ನು ಈ ವೆಬ್ಸೈಟ್ ನಲ್ಲಿ ಕ್ರೀಡಾಪಟು ಎಂದು ಹೇಳಲಾಗಿದೆ.
ಭಾರತ ಸೈನ್ಯದ ಎರಡನೇ ಮುಖ್ಯಸ್ಥ ಜನರಲ್ ರಾಜೇಂದ್ರ ಸಿನ್ಹಾಜಿ ಜಡೇಜಾ ಅವರು ಕೂಡಾ ಇಲ್ಲಿ ಕ್ರೀಡಾ ಪಟುಗಳ ಪಟ್ಟಿಯಲ್ಲಿದ್ದಾರೆ. ಆದಾಗ್ಯೂ, ಗುಜರಾತ್ನ ಸಂಸ್ಥಾಪಕ ಸುಲ್ತಾನ್ ಅಹ್ಮದ್ ಶಾ ಅವರನ್ನು ಮೆಡಿಟೇಷನ್ ಪಟ್ಟಿಯಲ್ಲಿ ಸೇರಿಸಲಾಗಿದೆ.
ಅಧಿಕೃತ ವೆಬ್ಸೈಟ್ ನಲ್ಲೇ ಇಷ್ಟೊಂದು ತಪ್ಪು ಯಾಕೆ ಎಂದು ಪ್ರಶ್ನಿಸಿದಾಗ, ಗುಜರಾತ್ ಸರ್ಕಾರದ ಈ ವೆಬ್ಸೈಟ್ನ ನಿರ್ವಹಣೆಯನ್ನು ಖಾಸಗಿ ಐಟಿ ಸಂಸ್ಥೆಯೊಂದು ನಡೆಸುತ್ತಿದೆ ಎಂದು ಗುಜರಾತ್ ಸರ್ಕಾರದ ಜನರಲ್ ಅಡ್ಮಿನಿಸ್ಟ್ರೇಷನ್ ವಿಭಾಗದ ಕಾರ್ಯದರ್ಶಿ ಧನಂಜಯ್ ದ್ವಿವೇದಿ ಉತ್ತರಿಸಿದ್ದಾರೆ.