ಬದಾವೂ (ಉತ್ತರಪ್ರದೇಶ): ಜವಾಹರ್ಲಾಲ್ ನೆಹರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘಟನೆಯ ಅಧ್ಯಕ್ಷ ಕನ್ಹಯ್ಯ ಕುಮಾರ್ನ ನಾಲಗೆ ಕತ್ತರಿಸಿದವರಿಗೆ ರು. 5 ಲಕ್ಷ ಬಹುಮಾನವಾಗಿ ನೀಡುತ್ತೇನೆ ಎಂದು ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ನಾಯಕ ಘೋಷಿಸಿದ್ದಾರೆ.
ಬದಾವೂ ಜಿಲ್ಲೆಯ ಬಿಜೆವೈಎಂ ಜಿಲ್ಲಾ ಅಧ್ಯಕ್ಷ ಕುಲ್ದೀಪ್ ವರ್ಶ್ನೆ ಎಂಬಾತ ಇದೀಗ ಈ ರೀತಿ ಘೋಷಣೆ ಮಾಡಿದ್ದಾರೆ.
ದೇಶದ್ರೋಹದ ಆರೋಪದಲ್ಲಿ ಫೆ. 12ರಂದು ಕನ್ಹಯ್ಯ ಅವರನ್ನು ಬಂಧಿಸಲಾಗಿತ್ತು. ಮಾರ್ಚ್ 3ಕ್ಕೆ ದೆಹಲಿ ಹೈಕೋರ್ಟ್ ಆತನಿಗೆ ಷರತ್ತುಬದ್ಧ ಜಾಮೀನು ನೀಡಿ ಮಾರ್ಚ್ 3 ಕ್ಕೆ ಬಿಡುಗಡೆ ಮಾಡಿತ್ತು.
ದೇಶದ್ರೋಹಿ ಘೋಷಣೆಗಳನ್ನು ಕೂಗಿದ ನಂತರ ಕನ್ಹಯ್ಯ ಈಗ ಎಲ್ಲರನ್ನೂ ಟಾರ್ಗೆಟ್ ಮಾಡುತ್ತಿದ್ದಾರೆ ಎಂಬುದು ವರ್ಶ್ನೆ ಅವರ ಆರೋಪ.
ವರ್ಶ್ನೆ ಉಚ್ಛಾಟನೆ: ಈ ರೀತಿ ಬಹುಮಾನ ಘೋಷಿಸಿ ವಿವಾದ ಸೃಷ್ಟಿಸಿದ ವರ್ಶ್ನೆ ಅವರನ್ನು ಬಿಜೆಪಿಯಿಂದ 6 ವರ್ಷಗಳ ಕಾಲ ವಜಾ ಮಾಡಲಾಗಿದೆ ಎಂದು ಬಲ್ಲಮೂಲಗಳು ಹೇಳಿವೆ.