ಇಂದೋರ್: ದೇಶಭಕ್ತಿ ಪಾಠ ಹೇಳಿಕೊಡುವುದರಲ್ಲಿ ಕನ್ಹಯ್ಯ ತಾಯಿ ವಿಫಲವಾಗಿರುವುದರಿಂದ ಕನ್ಹಯ್ಯ ದೇಶ ವಿರೋಧಿ ಘೋಷಣೆ ಕೂಗಿದ್ದಾನೆಂದು ಇಂದೋರ್'ನ ಬಿಜೆಪಿ ಶಾಸಕಿ ಉಷಾ ಠಾಕೂರ್ ಅವರು ಮಂಗಳವಾರ ಹೇಳಿದ್ದಾರೆ.
ಮಹಿಳಾ ದಿನಾಚರಣೆಯ ಅಂಗವಾಗಿ ಇಂದೋರ್ ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಆಗಮಿಸಿದ್ದ ಬಿಜೆಪಿ ಶಾಕಿ ಉಷಾ ಠಾಕೂರ್ ಅವರು ಜೆಎನ್ ಯು ವಿವಾದವನ್ನು ಪ್ರಸ್ತಾಪಿಸಿದ್ದರು. ಈ ವೇಳೆ ತಾಯಿಯಾದಳು ತನ್ನ ಮಗುವನ್ನು ಸರಿಯಾಗಿ ನೋಡಿಕೊಳ್ಳದಿದ್ದರೆ, ನಿರ್ಲಕ್ಷ್ಯವಹಿಸಿದರೆ ಆ ಮಕ್ಕಳು ಉಗ್ರರು, ಮಾವೋವಾದಿಗಳು ಹಾಗೂ ದೇಶ ವಿರೋಧಿಗಳಾಗುತ್ತಾರೆ ಎಂದು ಹೇಳಿದ್ದಾರೆ.
ಮಕ್ಕಳು ಏನೇ ಆದರೂ ಅದಕ್ಕೆ ತಾಯಿಯೇ ಜವಾಬ್ದಾರಳು. ದೇಶಭಕ್ತಿ ಹಾಗೂ ದೇಶದ ಮೌಲ್ಯಗಳ ಬಗ್ಗೆ ಮಕ್ಕಳಿಗೆ ಪಾಠ ಹೇಳಿಕೊಡುವುದರಲ್ಲಿ ಆಕೆ ವಿಫಲವಾದರೆ, ಆ ಮಗು ಭಯೋತ್ಪಾದನಾಗುತ್ತದೆ. ಮಾವೋವಾದಿಯಾಗುತ್ತದೆ ಹಾಗೂ ದೇಶ ವಿರೋಧಿಯಾಗುತ್ತದೆ ಇದಕ್ಕೆಲ್ಲಾ ತಾಯಿಯೇ ಜವಾಬ್ದಾರಳಾಗಿರುತ್ತಾಳೆಂದು ಹೇಳಿದ್ದಾರೆ.
Advertisement