ಡಿ.9 , 10 ರಂದು ದೆಹಲಿಯಲ್ಲಿ ಹಾಗೂ ಡಿ.12 ರಂದು ಮುಂಬೈ ನಲ್ಲಿ ಮಲ್ಯ ತನಿಖಾ ತಂಡದ ಎದುರು ಹಾಜರಾಗಿದ್ದರು. ಇದಾದ ಬಳಿಕ ಸಿಬಿಐ ಮಲ್ಯ ವಿರುದ್ಧ ಹೊರಡಿಸಿದ್ದ ಲುಕ್ ಔಟ್ ನೋಟಿಸ್( ಬಂಧನ ಆದೇಶ)ದ ಸ್ವರೂಪವನ್ನು ಬದಲಾವಣೆ ಮಾಡಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಹೇಳಿಕೆ ನೀಡಿರುವ ಸಿಬಿಐ ಅಧಿಕಾರಿ ವಿಜಯ್ ಮಲ್ಯ ವಿರುದ್ಧದ ಮೊದಲ ಬಂಧನ ಆದೇಶ ತಪ್ಪಾಗಿತ್ತು ಎಂದು ಸಮರ್ಥನೆ ನೀಡಿದ್ದಾರೆ.