ಈ ಮಧ್ಯೆ ಪೊಲೀಸರ ಈ ಆರೋಪವನ್ನು ತಳ್ಳಿ ಹಾಕಿರುವ ನಿಧನರಾಗಿರುವ ನಾಲ್ವರು ಕುಟುಂಬ ಸದಸ್ಯರು, ಕೆರೆಯನ್ನು ಒತ್ತುವರಿ ಮಾಡಿರುವುದು ಬಿಲ್ಡರ್ ಗಳು, ಅವರನ್ನು ರಕ್ಷಿಸಲು ಪೊಲೀಸರು ನಮ್ಮ ಮೇಲೆ ಆರೋಪ ಮಾಡುತ್ತಿದ್ದಾರೆ. ಸ್ಥಳೀಯ ದೇವಸ್ಥಾನಕ್ಕೆ ಸೇರಿದ ಜಾಗವಾಗಿದ್ದು, ಇದನ್ನು ಬಿಲ್ಡರ್ ಗಳು ತಮ್ಮ ಅಕ್ರಮಗಳ ಕೆಲಸಗಳಿಗೆ ಬಳಿಸಿಕೊಳ್ಳುತ್ತಿದ್ದಾರೆ. ಅವರ ಬೆಂಬಲಕ್ಕೆ ಪೊಲೀಸರು ನಿಂತಿದ್ದು, ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಪ್ರಕರಣವನ್ನು ಬೇರೆ ಕಡೆಗೆ ತಿರುಚಿ ಬಿಲ್ಡಿರ್ ಗೆ ಸಹಾಯ ಮಾಡುವ ಹುನ್ನಾರ ನಡೆಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ.