ಏಪ್ರಿಲ್ 2 ರೊಳಗೆ ಖುದ್ದು ಹಾಜರಾಗಿ: ಮಲ್ಯಗೆ ಜಾರಿ ನಿರ್ದೇಶನಾಲಯ ಸಮನ್ಸ್

ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ರು. ಸಾಲ ಪಡೆದು ವಿದೇಶಕ್ಕೆ ಹಾರಿರುವ ಮದ್ಯದೊರೆ ವಿಜಯ ಮಲ್ಯ ಅವರಿಗೆ ಜಾರಿ ನಿರ್ದೇಶನಾಲಯ ಹೊಸದಾಗಿ ಸಮನ್ಸ್ ನೀಡಿದೆ...
ವಿಜಯ ಮಲ್ಯ
ವಿಜಯ ಮಲ್ಯ

ಮುಂಬಯಿ: ಬ್ಯಾಂಕ್ ಗಳಿಂದ ಸಾವಿರಾರು ಕೋಟಿ ರು. ಸಾಲ ಪಡೆದು ವಿದೇಶಕ್ಕೆ ಹಾರಿರುವ ಮದ್ಯದೊರೆ ವಿಜಯ ಮಲ್ಯ ಅವರಿಗೆ ಜಾರಿ ನಿರ್ದೇಶನಾಲಯ ಹೊಸದಾಗಿ ಸಮನ್ಸ್ ನೀಡಿದೆ.

ಐಡಿಬಿಐ ಬ್ಯಾಂಕ್ ನಿಂದ 900 ಕೋಟಿ ರು. ಸಾಲ ಪಡೆದು ವಂಚಿಸಿರುವ ಮಲ್ಯ ಏಪ್ರಿಲ್ 2ರಂದು ಖುದ್ದು ಹಾಜರಾಗಬೇಕು ಎಂದು ಇಡಿ ಸಮನ್ಸ್ ಜಾರಿ ಮಾಡಿದೆ.

ಯುನೈಟೆಡ್ ಬ್ರಿವರೀಸ್ ಅಧ್ಯಕ್ಷರಾಗಿರುವ ಮಲ್ಯ ನಿನ್ನೆ  ಜಾರಿ ನಿರ್ದೇಶನಾಲಯ ಅಧಿಕಾರಿಗಳನ್ನು ಇ-ಮೇಲ್ ಮೂಲಕ ಸಂಪರ್ಕಿಸಿ ಹಾಜಾರಾಗಲು ಹೆಚ್ಚುವರಿ  ಸಮಯ ಕೋರಿದ್ದರು. ಈ ಮನವಿ ಪುರಸ್ಕರಿಸಿರುವ ಇಡಿ ಏಪ್ರಿಲ್ 2 ವರೆಗೆ ಕಾಲವಾಕಾಶ ನೀಡಿದೆ.

ಏಪ್ರಿಲ್ 2 ರಂದು ಖುದ್ದು ಹಾಜರಾಗಬೇಕೆಂದು ಇಡಿ ತಿಳಿಸಿದೆ. ಮಾರ್ಚ್ ನಲ್ಲಿ ಹಾಜರಾಗಬೇಕೆಂದು ಮಲ್ಯಗೆ ತನಿಖಾಧಿಕಾರಿಗಳು ಸೂಚಿಸಿದ್ದರು. ಆದರೆ ಆ ಸಮಯದಲ್ಲಿ ತಾವು ಹಾಜರಾಗಲು ಸಾಧ್ಯವಿಲ್ಲ ಎಂಬುದಾಗಿ ಹೇಳಿರುವ ಮಲ್ಯ, ಕಾರಣ ಹಾಗೂ ವಿವರಣೆ ನೀಡಿರುವ ಹಿನ್ನೆಲೆಯಲ್ಲಿ ಇಡಿ ಏಪ್ರಿಲ್ 2 ರವರೆಗೆ ಕಾಲಾವಾಕಾಶ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com