ನವದೆಹಲಿಗೆ ತೆರಳಿ ಬಿಜೆಪಿ ನಾಯಕರೊಂದಿಗೆ ಚರ್ಚೆ ನಡೆಸುವುದು ಮೆಹಬೂಬಾ ಮುಫ್ತಿ ಅವರ ಕೊನೆಯ ಪ್ರಯತ್ನವಾಗಿದೆ. ಪಕ್ಷವನ್ನು ಉಳಿಸಿಕೊಳ್ಳಲು ಮೆಹಬೂಬಾ ಮುಫ್ತಿ ಈ ರೀತಿಯ ಯತ್ನ ನಡೆಸುತ್ತಿದ್ದಾರೆ. ಬಿಜೆಪಿಯ ಷರರ್ತ್ತುಗಳಿಗೆ ಅನುಗುಣವಾಗಿ ಸರ್ಕಾರ ರಚನೆ ಸಾಧ್ಯವಾಗದೇ ಇದ್ದರೆ ಪಿಡಿಪಿ ಪಕ್ಷ ಇಬ್ಭಾಗವಾಗುತ್ತದೆ, ಹಾಗಾದರೆ ಮತ್ತಷ್ಟು ದುರ್ಬಲವಾಗುತ್ತೇನೆ ಎಂಬುದು ಮೆಹಬೂಬಾ ಮುಫ್ತಿ ಅವರಿಗೆ ಅರ್ಥವಾಗಿದೆ ಎಂದು ಓಮರ್ ಅಬ್ದುಲ್ಲಾ ರಾಜ್ಯಪಾಲರ ಭೇಟಿ ನಂತರ ಮಾಧ್ಯಮಗಳಿಗೆ ತಿಳಿಸಿದ್ದಾರೆ.