ವಿಲ್ಲುಪುರಂ: ದೇವಾಲಯದ ಆಡಳಿತ ಮಂಡಳಿ ಆಯೋಜಿಸಿದ್ದ ಹರಾಜಿನಲ್ಲಿ ಪವಿತ್ರ ನಿಂಬೆ ಹಣ್ಣೊಂದು 39 ಸಾವಿರ ರು.ಗೆ ಮಾರಾಟವಾಗಿದೆ.
ವಿಲ್ಲುಪುರಂ ಜಿಲ್ಲೆಯ ತಿರುವನೈನಲ್ಲೂರಿನಲ್ಲಿರುವ ಮುರುಗನ್ ದೇವಸ್ಥಾನದ ಪಂಗುನಿ ಉಥಿರಮ್ ಉತ್ಸವದ ಪವಿತ್ರ ಲಿಂಬೆ 39 ಸಾವಿರ ರೂ.ಗೆ ಹರಾಜಾಗಿದೆ. ಜಯರಾಮ್ ಮತ್ತು ಅಮರಾವತಿ ದಂಪತಿ ಈ ನಿಂಬೆಯನ್ನು ಹರಾಜಿನಲ್ಲಿ ಖರೀದಿಸಿದ್ದಾರೆ.
ಇನ್ನು ಉಳಿದ ಎಲ್ಲ ನಿಂಬೆ ಹಣ್ಣು ಸೇರಿ ಒಟ್ಟು 57,722 ರೂ.ಗೆ ಮಾರಾಟಗೊಂಡಿವೆ. ದೇವರಾದ ಮುರುಗನ್ ತ್ರಿಶೂಲಕ್ಕೆ ಚುಚ್ಚಲಾಗಿರುವ ನಿಂಬೆ ಹಣ್ಣನ್ನು ಹರಾಜು ಮಾಡುವುದು ಇಲ್ಲಿನ ಸಂಪ್ರದಾಯ. ಈ ನಿಂಬೆಯನ್ನು ಪಡೆದುಕೊಳ್ಳುವವರಿಗೆ ಸಮೃದ್ಧಿ ಮತ್ತು ದಂಪತಿಗೆ ಸಂತಾನ ಭಾಗ್ಯ ಲಭಿಸುತ್ತದೆ ಎಂಬುದು ಭಕ್ತರ ನಂಬಿಕೆ.
Advertisement