ಕಾಲು ಮುರಿದುಕೊಂಡಿದ್ದ ಶಕ್ತಿಮಾನ್ ವೇಗವಾಗಿ ಚೇತರಿಕೆ: ವೈದ್ಯರು

ಭಾರತೀಯ ಜನತಾ ಪಕ್ಷ ಶಾಸಕ ಗಣೇಶ್ ಜೋಶಿಯಿಂದ ಹಲ್ಲೆಗೊಳಗಾಗಿ ಕಾಲು ಮುರಿದುಕೊಂಡಿದ್ದ ಪೊಲೀಸ್ ಕುದುರೆ ಶಕ್ತಿಮಾನ್ ಚೇತರಿಸಿಕೊಳ್ಳುತ್ತಿದೆ ಎಂದು
ಶಕ್ತಿಮಾನ್ ಕುದುರೆ
ಶಕ್ತಿಮಾನ್ ಕುದುರೆ

ಡೆಹರಾಡೂನ್: ಭಾರತೀಯ ಜನತಾ ಪಕ್ಷ ಶಾಸಕ ಗಣೇಶ್ ಜೋಶಿಯಿಂದ ಹಲ್ಲೆಗೊಳಗಾಗಿ ಕಾಲು ಮುರಿದುಕೊಂಡಿದ್ದ ಪೊಲೀಸ್ ಕುದುರೆ ಶಕ್ತಿಮಾನ್ ಚೇತರಿಸಿಕೊಳ್ಳುತ್ತಿದೆ ಎಂದು ವೈದ್ಯರು ಹೇಳಿದ್ದಾರೆ.

ಶಕ್ತಿಮಾನ್ ಆರೋಗ್ಯದ ಬಗ್ಗೆ ನಿಗಾ ವಹಿಸಿರುವ ವೈದ್ಯ ರಾಕೇಶ್ ಕುಮಾರ್ ನೌಟಿಯಾಲ್, ಗಾಯಗೊಂಡಿದ್ದ ಕುದುರೆ ಆರೋಗ್ಯವಾಗಿದ್ದು, ಚೇತರಿಸಿಕೊಳ್ಳುತ್ತಿದೆ. ಸರಿಯಾಗಿ ಆಹಾರ ತೆಗೆದುಕೊಳ್ಳುತ್ತಿದೆ ಎಂದು ಹೇಳಿದ್ದಾರೆ.

ಸಮಯಕ್ಕೆ ಸರಿಯಾಗಿ ಶಕ್ತಿಮಾನ್ ಗೆ ಡ್ರೆಸ್ಸಿಂಗ್ ಮಾಡುತ್ತಿದ್ದು , ಅಗತ್ಯವಾದ ಔಷಧಿಗಳನ್ನು ನೀಡುತ್ತಿದ್ದೇವೆ. ಹೀಗಾಗಿ ಗಾಯ ಬೇಗ ಗುಣವಾಗುತ್ತಿದೆ ಎಂದು ಹೇಳಿದ್ದಾರೆ,

ಕುದುರೆಯನ್ನು ಎತ್ತಿ ನಿಲ್ಲಿಸಲು ಸದ್ಯ ಕ್ರೇನ್ ಬಳಸಲಾಗುತ್ತಿತ್ತು. ಕಳೆದ ನಾಲ್ಕು ದಿನಗಳಿಂದ ತಾನಾಗಿಯೇ ಶಕ್ತಿಮಾನ್ ಎದ್ದು ನಿಲ್ಲುತ್ತಿದ್ದಾನೆ ಎಂದು ವೈದ್ಯರು ಹೇಳಿದ್ದಾರೆ,

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com