ಫ್ಲೈ ಓವರ್ ಮತ್ತೆ ಹೊಸದಾಗಿ ನಿರ್ಮಾಣ ಮಾಡಬೇಕು: ಸ್ಥಳೀಯ ಸಂಸದ ಸುದೀಪ್

ಉತ್ತರ ಕೋಲ್ಕತಾದಲ್ಲಿ ಕುಸಿದುಬಿದ್ದ ಫ್ಲೈ ಓವರ್'ನ್ನು ಮತ್ತೆ ಹೊಸದಾಗಿ ನಿರ್ಮಾಣ ಮಾಡಬೇಕೆಂದು ಸ್ಥಳೀಯ ತೃಣಮೂಲ ಕಾಂಗ್ರೆಸ್ ಸಂಸದ ಸುದೀಪ್ ಬಂಡ್ಯೋಪಧ್ಯಾಯ ಶುಕ್ರವಾರ ಹೇಳಿದ್ದಾರೆ...
ಕುಸಿದು ಬಿದ್ದಿರುವ ಫ್ಲೈ ಓವರ್
ಕುಸಿದು ಬಿದ್ದಿರುವ ಫ್ಲೈ ಓವರ್
Updated on

ನವದೆಹಲಿ: ಉತ್ತರ ಕೋಲ್ಕತಾದಲ್ಲಿ ಕುಸಿದುಬಿದ್ದ ಫ್ಲೈ ಓವರ್'ನ್ನು ಮತ್ತೆ ಹೊಸದಾಗಿ ನಿರ್ಮಾಣ ಮಾಡಬೇಕೆಂದು ಸ್ಥಳೀಯ ತೃಣಮೂಲ ಕಾಂಗ್ರೆಸ್ ಸಂಸದ ಸುದೀಪ್ ಬಂಡ್ಯೋಪಧ್ಯಾಯ ಶುಕ್ರವಾರ ಹೇಳಿದ್ದಾರೆ.

ಈ ಕುರಿತಂತೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿರುವ ಅವರು, ಈಗಾಗಲೇ ಸೇತುವೆ ನಿರ್ಮಾಣಕ್ಕೆ ಸಾಕಷ್ಟು ಖರ್ಚು ಮಾಡಲಾಗಿದ್ದು, ಇದನ್ನುಗಮನದಲ್ಲಿಟ್ಟುಕೊಂಡು ಕುಸಿದಿರುವ ಫ್ಲೈ ಓವರ್ ನ್ನು ಮತ್ತೆ ಹೊಸದಾಗಿ ನಿರ್ಮಾಣ ಮಾಡಿದರೆ ಉತ್ತಮವಾಗಿರುತ್ತದೆ.

ಫ್ಲೈ ಓವರ್ ನಿರ್ಮಾಣ ಪ್ರಸ್ತಾವ ಬಂದಾಗ ಸರ್ಕಾರ ಈ ಹಿಂದೆ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಫ್ಲೈ ಓವರ್ ನಿರ್ಮಾಣದ ಬಗ್ಗೆ ಸಾಕಷ್ಟು ಗೊಂದಲ ಹಾಗೂ ಟೀಕೆಗಳು ವ್ಯಕ್ತವಾಗಿದ್ದವು. ಈ ಮಧ್ಯೆಯೇ ನಿರ್ಮಾಣ ಕಾರ್ಯ ಶೇ. 50-60 ಆಗಿತ್ತು. ಹೀಗಾಗಿ ಸರ್ಕಾರ ಇದಕ್ಕೆ ಅನುಮತಿ ನೀಡಿತ್ತು  ಎಂದು ಹೇಳಿದ್ದಾರೆ

ಇದೇ ವೇಳೆ ಸೇತುವೆ ನಿರ್ಮಾಣಕ್ಕಾಗಿ ಎಷ್ಟು ಖರ್ಚಾಗಿದೆ ನಿಮಗೆ ಗೊತ್ತಾ ಎಂದು ಮಾಧ್ಯಮದವರನ್ನು ಪ್ರಶ್ನೆ ಹಾಕಿರುವ ಅವರು, ಸೇತುವೆ ನಿರ್ಮಾಣದ ಆರ್ಥಿಕ ಸಮಸ್ಯೆ ಬಗ್ಗೆ ಸರ್ಕಾರ ಗಮನಹರಿಸುತ್ತಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com