ಫ್ಲೈ ಓವರ್ ಮತ್ತೆ ಹೊಸದಾಗಿ ನಿರ್ಮಾಣ ಮಾಡಬೇಕು: ಸ್ಥಳೀಯ ಸಂಸದ ಸುದೀಪ್

ಉತ್ತರ ಕೋಲ್ಕತಾದಲ್ಲಿ ಕುಸಿದುಬಿದ್ದ ಫ್ಲೈ ಓವರ್'ನ್ನು ಮತ್ತೆ ಹೊಸದಾಗಿ ನಿರ್ಮಾಣ ಮಾಡಬೇಕೆಂದು ಸ್ಥಳೀಯ ತೃಣಮೂಲ ಕಾಂಗ್ರೆಸ್ ಸಂಸದ ಸುದೀಪ್ ಬಂಡ್ಯೋಪಧ್ಯಾಯ ಶುಕ್ರವಾರ ಹೇಳಿದ್ದಾರೆ...
ಕುಸಿದು ಬಿದ್ದಿರುವ ಫ್ಲೈ ಓವರ್
ಕುಸಿದು ಬಿದ್ದಿರುವ ಫ್ಲೈ ಓವರ್

ನವದೆಹಲಿ: ಉತ್ತರ ಕೋಲ್ಕತಾದಲ್ಲಿ ಕುಸಿದುಬಿದ್ದ ಫ್ಲೈ ಓವರ್'ನ್ನು ಮತ್ತೆ ಹೊಸದಾಗಿ ನಿರ್ಮಾಣ ಮಾಡಬೇಕೆಂದು ಸ್ಥಳೀಯ ತೃಣಮೂಲ ಕಾಂಗ್ರೆಸ್ ಸಂಸದ ಸುದೀಪ್ ಬಂಡ್ಯೋಪಧ್ಯಾಯ ಶುಕ್ರವಾರ ಹೇಳಿದ್ದಾರೆ.

ಈ ಕುರಿತಂತೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿರುವ ಅವರು, ಈಗಾಗಲೇ ಸೇತುವೆ ನಿರ್ಮಾಣಕ್ಕೆ ಸಾಕಷ್ಟು ಖರ್ಚು ಮಾಡಲಾಗಿದ್ದು, ಇದನ್ನುಗಮನದಲ್ಲಿಟ್ಟುಕೊಂಡು ಕುಸಿದಿರುವ ಫ್ಲೈ ಓವರ್ ನ್ನು ಮತ್ತೆ ಹೊಸದಾಗಿ ನಿರ್ಮಾಣ ಮಾಡಿದರೆ ಉತ್ತಮವಾಗಿರುತ್ತದೆ.

ಫ್ಲೈ ಓವರ್ ನಿರ್ಮಾಣ ಪ್ರಸ್ತಾವ ಬಂದಾಗ ಸರ್ಕಾರ ಈ ಹಿಂದೆ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಫ್ಲೈ ಓವರ್ ನಿರ್ಮಾಣದ ಬಗ್ಗೆ ಸಾಕಷ್ಟು ಗೊಂದಲ ಹಾಗೂ ಟೀಕೆಗಳು ವ್ಯಕ್ತವಾಗಿದ್ದವು. ಈ ಮಧ್ಯೆಯೇ ನಿರ್ಮಾಣ ಕಾರ್ಯ ಶೇ. 50-60 ಆಗಿತ್ತು. ಹೀಗಾಗಿ ಸರ್ಕಾರ ಇದಕ್ಕೆ ಅನುಮತಿ ನೀಡಿತ್ತು  ಎಂದು ಹೇಳಿದ್ದಾರೆ

ಇದೇ ವೇಳೆ ಸೇತುವೆ ನಿರ್ಮಾಣಕ್ಕಾಗಿ ಎಷ್ಟು ಖರ್ಚಾಗಿದೆ ನಿಮಗೆ ಗೊತ್ತಾ ಎಂದು ಮಾಧ್ಯಮದವರನ್ನು ಪ್ರಶ್ನೆ ಹಾಕಿರುವ ಅವರು, ಸೇತುವೆ ನಿರ್ಮಾಣದ ಆರ್ಥಿಕ ಸಮಸ್ಯೆ ಬಗ್ಗೆ ಸರ್ಕಾರ ಗಮನಹರಿಸುತ್ತಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com