ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

3ನೇ ಬಾರಿಯು ಹೆಣ್ಣುಮಗು; ಭ್ರಮನಿರಸನಗೊಂಡ ಪೋಷಕರಿಂದ ಶಿಶುಹತ್ಯೆ

ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ ಪೋಷಕರಿಗೆ 3ನೇ ಬಾರಿಯ ಹೆಣ್ಣು ಮಗು ಜನಿಸಿದ್ದರ ರಿಂದ ಅಸಮಾಧಾನಗೊಂಡ ತಂದೆ ತಾಯಿ ತಮ್ಮ 22 ದಿನದ ಮಗುವನ್ನು...
Published on

ಮಿಡ್ನಾಪುರ್: ಗಂಡು ಮಗುವಿನ ನಿರೀಕ್ಷೆಯಲ್ಲಿದ್ದ ಪೋಷಕರಿಗೆ 3ನೇ ಬಾರಿಯ ಹೆಣ್ಣು ಮಗು ಜನಿಸಿದ್ದರ ರಿಂದ ಅಸಮಾಧಾನಗೊಂಡ ತಂದೆ ತಾಯಿ ತಮ್ಮ 22 ದಿನದ ಮಗುವನ್ನು ಕೊಂದಿರುವ ಘಟನೆ ಪಿಂಗಳಾ ಪ್ರದೇಶದ ಮಿಡ್ನಾಪುರದಲ್ಲಿ ನಡೆದಿದೆ.

ದುರ್ಗಾ ಶಂಕರ್ ಮಂಡಲ್ ಮತ್ತು ರಿಂಕು ಮಂಡಲ್ ಗೆ ಈ ಮೊದಲು ಎರಡು ಹೆಣ್ಣು ಮಕ್ಕಳಿದ್ದಾರೆ. ಗಂಡು ಮಗುವಿಗಾಗಿ ಹಂಬಲಿಸುತ್ತಿದ್ದ ದಂಪತಿಗೆ 3ನೇ ಮಗುವು ಹೆಣ್ಣುಮಗುವೇ ಜನಿಸಿದ್ದರಿಂದ ತಮ್ಮ 22ನೇ ದಿನದ ಮಗುವನ್ನು ಕತ್ತು ಹಿಸುಕಿ ಕೊಂದಿದ್ದಾರೆ.

ಕರ್ಕುರಿ ಗ್ರಾಮದವರಾದ ಈ ದಂಪತಿಯನ್ನು ಪೊಲೀಸರು ಬಂಧಿಸಿದ್ದು ವಿಚಾರಣೆ ನಡೆಸುತ್ತಿರುವುದಾಗಿ ಸೂಪರಿಂಟೆಂಡ್ ಆಫ್ ಪೊಲೀಸ್ ಬಿ.ಚಂದ್ರಶೇಖರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com