ಉಜ್ಜೈನಿ ಕುಂಭಮೇಳ: ಬಿರುಗಾಳಿ ಸಹಿತ ಮಳೆ; 6 ಸಾವು

ಮಧ್ಯಪ್ರದೇಶದ ಉಜ್ಜೈನಿಯಲ್ಲಿ ನಡೆಯುತ್ತಿರುವ ಸಿಂಹಸ್ತ ಕುಂಭ ಮೇಳದ ವೇಳೆ ಉಂಟಾದ ಭಾರೀ ಗುಡುಗು ...
ಕುಂಭಮೇಳದ ಸಾಂದರ್ಭಿಕ ಚಿತ್ರ
ಕುಂಭಮೇಳದ ಸಾಂದರ್ಭಿಕ ಚಿತ್ರ

ಉಜ್ಜೈನಿ: ಮಧ್ಯಪ್ರದೇಶದ ಉಜ್ಜೈನಿಯಲ್ಲಿ ನಡೆಯುತ್ತಿರುವ ಸಿಂಹಸ್ತ ಕುಂಭ ಮೇಳದ ವೇಳೆ ಉಂಟಾದ ಭಾರೀ ಗುಡುಗು ಮಿಂಚಿಗೆ ಸಿಲುಕಿ ಇದುವರೆಗೆ 6 ಮಂದಿ ಸಾವನ್ನಪ್ಪಿದ್ದು, ಸುಮಾರು 40 ಮಂದಿ ಗಾಯಗೊಂಡಿದ್ದಾರೆ.

ಕೋಲ್ಮಿಂಚಿಗೆ ಸಿಲುಕಿ ಓರ್ವ ಮಹಿಳಾ ಯಾತ್ರಿ ಕೂಡ ಉಂಡಾಸಾ ಪ್ರದೇಶದಲ್ಲಿ ಸಾವನ್ನಪ್ಪಿದ್ದಾರೆ ಎಂದು ಉಜ್ಜೈನಿ ಪೊಲೀಸ್ ವರಿಷ್ಠಾಧಿಕಾರಿ ಮನೋಹರ್ ವರ್ಮಾ ತಿಳಿಸಿದ್ದಾರೆ. ಮಹಿಳೆಯ ಗುರುತು ಇನ್ನೂ ಸಿಕ್ಕಿಲ್ಲ.

ಗುಡುಗು, ಮಿಂಚಿನೊಂದಿಗೆ ಬಿರುಗಾಳಿ ಸೇರಿಕೊಂಡು ಮಳೆ ಹಠಾತ್ತನೆ ಉಜ್ಜೈನಿಗೆ ಬಂದೆರಗಿತು. ಇದರಿಂದ ಸಾಧುಗಳ ಶಿಬಿರಗಳು ಕೂಡ ಹಾನಿಗೀಡಾಗಿವೆ.

ಉಜ್ಜೈನಿಯ ಉಸ್ತುವಾರಿ ಸಚಿವ ಭೂಪೀಂದರ್ ಸಿಂಗ್ ಅವರು ಹೇಳುವ ಪ್ರಕಾರ 15ರಿಂದ 20 ಪ್ರಯಾಣಿಕರು ಗಾಯಗೊಂಡಿದ್ದಾರೆ. ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ. ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ವರದಿ ಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com