ಕೇಂದ್ರ ಸರ್ಕಾರದಲ್ಲಿರುವ ಪ್ರಭಾವಿ ವ್ಯಕ್ತಿಗಳ ಶಿಫಾರಸ್ಸಿನ ಮೇರೆಗೆ ಪರಿಶೀಲನೆ ನಡೆಸದೇ ಪಿಸ್ತೂಲ್ ಪರವಾನಗಿ ನೀಡಲಾಗಿದೆ ಎಂದ ಅವರು, ಒಂದು ವೇಳೆ ಈ ಕೆಲಸವನ್ನು ಬಿಹಾರದ ಪೊಲೀಸರು ಮಾಡಿದ್ದರೆ, ಕೇಂದ್ರ ಕೋಲಾಹಲವನ್ನೇ ಎಬ್ಬಿಸುತಿತ್ತು. ತಮ್ಮ ಹಲವಾರು ತಪ್ಪುಗಳನ್ನು ಮುಚ್ಚಿಡಲು ಬಿಹಾರದ ಸರ್ಕಾರವನ್ನು ಕೇಂದ್ರ ಸರ್ಕಾರ ಗುರಿಯಾಗಿಸಿಕೊಂಡಿದೆ ಎಂದು ಅವರು ಆರೋಪಿಸಿದ್ದಾರೆ.