ಪುದುಚೇರಿಯಲ್ಲಿ ಕಾಂಗ್ರೆಸ್ ಮೈತ್ರಿಕೂಟ- ಎಐಎನ್ ಆರ್ ಸಿ ನಡುವೆ ನೇರ ಹಣಾಹಣಿ

ಆಡಳಿತಾರೂಢ ಎಐಎನ್ ಆರ್ ಸಿ ಹಾಗೂ ಕಾಂಗ್ರೆಸ್- ಡಿಎಂಕೆ ಮೈತ್ರಿಕೂಟದ ನಡುವೆ ನೇರ ಹಣಾಹಣಿ ನಡೆಯುತ್ತಿದ್ದು ಒಂದು ಸ್ಥಾನದ ಅಂತರದಲ್ಲಿ ಆಡಳಿತಾರೂಢ ಎಐಎನ್ ಆರ್ ಸಿ ಮುನ್ನಡೆ...
ಪುದುಚೆರಿಯ ಹಾಲಿ ಸಿಎಂ ಎನ್ ರಂಗಸ್ವಾಮಿ
ಪುದುಚೆರಿಯ ಹಾಲಿ ಸಿಎಂ ಎನ್ ರಂಗಸ್ವಾಮಿ

ಪುದುಚೆರಿ: ಐದು ರಾಜ್ಯಗಳ ಚುನಾವಣಾ ಫಲಿತಾಂಶ ಸ್ಪಷ್ಟ ಚಿತ್ರಣ ಪಡೆದಿದ್ದು, ಎಲ್ಲಾ ನಾಲ್ಕು ರಾಜ್ಯಗಳಲ್ಲಿ ಕುಸಿದಿದ್ದ ಕಾಂಗ್ರೆಸ್ ಮೈತ್ರಿಕೂಟ ಪುದುಚೆರಿಯಲ್ಲಿ ಸಮಾಧಾನಕರ ಮುನ್ನಡೆ ಸಾಧಿಸಿದೆ. ಆದರೆ ಆಡಳಿತಾರೂಢ ಎಐಎನ್ ಆರ್ ಸಿ ಹಾಗೂ ಕಾಂಗ್ರೆಸ್- ಡಿಎಂಕೆ ಮೈತ್ರಿಕೂಟದ ನಡುವೆ ನೇರ ಹಣಾಹಣಿ ನಡೆಯುತ್ತಿದ್ದು ಒಂದು ಸ್ಥಾನದ ಅಂತರದಲ್ಲಿ ಆಡಳಿತಾರೂಢ ಎಐಎನ್ ಆರ್ ಸಿ ಮುನ್ನಡೆ ಕಾಯ್ದುಕೊಂಡಿದೆ.

ಪುದುಚೇರಿಯ ಒಟ್ಟು 30 ವಿಧಾನಸಭಾ ಕ್ಷೇತ್ರಗಳ ಪೈಕಿ ಒಟ್ಟು 22 ಕ್ಷೇತ್ರಗಳ ಮುನ್ನಡೆ ಫಲಿತಾಂಶ ಬಹಿರಂಗವಾಗಿದೆ. ಈ 22 ಕ್ಷೇತ್ರಗಳಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ 10 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ ಆಡಳಿತಾರೂಢ ಎಐಎನ್ ಆರ್ ಸಿ 10 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಇನ್ನು ಎಐಎಡಿಎಂಕೆ ಹಾಗೂ ಇತರರು ತಲಾ ಒಂದು ಸ್ಥಾನದಲ್ಲಿ ಮುನ್ನಡೆ ಸಾಧಿಸಿದ್ದಾರೆ. ಪುದುಚೆರಿಯ ಮಾಜಿ ಮುಖ್ಯಮಂತ್ರಿ ವೈಥಿಲಿಂಗಮ್ ಕಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದಾರೆ. ಇನ್ನು ಹಾಲಿ ಸಿಎಂ ಎನ್ ರಂಗಸ್ವಾಮಿ ಅವರು ಮುನ್ನಡೆ ಸಾಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com