ಮೊದಲೇ ಸೋಲನ್ನು ಒಪ್ಪಿಕೊಂಡಂತಿದೆ ಸಮಾಜವಾದಿ ಪಕ್ಷ: ಮಾಯಾವತಿ

ಸಮಾಜವಾದಿ ಪಕ್ಷದ ಮಹಾಮೈತ್ರಿಯನ್ನು ನೋಡಿದರೆ, ಸಮಾಜವಾದಿ ಪಕ್ಷ ಮೊದಲೇ ಸೋಲನ್ನು ಒಪ್ಪಿಕೊಂಡಂತೆ ಕಾಣುತ್ತದೆ ಎಂದು ಬಿಎಸ್'ಪಿ ಮುಖ್ಯಸ್ಥೆ ಮಾಯಾವತಿಯವರು ಶನಿವಾರ ಹೇಳಿದ್ದಾರೆ...
ಬಿಎಸ್'ಪಿ ಮುಖ್ಯಸ್ಥೆ ಮಾಯಾವತಿ
ಬಿಎಸ್'ಪಿ ಮುಖ್ಯಸ್ಥೆ ಮಾಯಾವತಿ

ಲಖನೌ: ಸಮಾಜವಾದಿ ಪಕ್ಷದ ಮಹಾಮೈತ್ರಿಯನ್ನು ನೋಡಿದರೆ, ಸಮಾಜವಾದಿ ಪಕ್ಷ ಮೊದಲೇ ಸೋಲನ್ನು ಒಪ್ಪಿಕೊಂಡಂತೆ ಕಾಣುತ್ತದೆ ಎಂದು ಬಿಎಸ್'ಪಿ ಮುಖ್ಯಸ್ಥೆ ಮಾಯಾವತಿಯವರು ಶನಿವಾರ ಹೇಳಿದ್ದಾರೆ.

ಮುಂಬರುವ ಚುನಾವಣೆಗಾಗಿ ಸಮಾಜವಾದಿ ಪಕ್ಷ ಸಾಕಷ್ಟು ಪರಿಶ್ರಮವನ್ನು ಪಡುತ್ತಿದ್ದು, ಅವರ ಪರಿಶ್ರಮವನ್ನು ನೋಡಿದರೆ ಸಮಾಜವಾದಿ ಪಕ್ಷ ಮೊದಲೇ ಸೋಲನ್ನು ಒಪ್ಪಿಕೊಂಡಂತಿದೆ ಎಂದು ಹೇಳಿದ್ದಾರೆ.

ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ತಮ್ಮ ಸುತ್ತಲೂ ಅಪರಾಧಿಗಳನ್ನೇ ಇಟ್ಟುಕೊಂಡಿದ್ದಾರೆ ಮತ್ತು ಅವರ ಪಕ್ಷದಲ್ಲಿಯೇ ಅವರ ಮಾತಿಗೆ ಬೆಲೆಯಿಲ್ಲ. ಪಕ್ಷದ ಸದಸ್ಯರ ಸ್ವಾರ್ಥತೆಯ ಸ್ವಭಾವದಿಂದಾಗಿ ಸಮಾಜವಾದಿ ಪಕ್ಷದ ಒಡೆಯುತ್ತಿದೆ, ಉತ್ತರಪ್ರದೇಶದಲ್ಲಿ ಜಂಗಲ್ ರಾಜ್ ಸರ್ಕಾರವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಇದೇ ವೇಳೆ ಬಿಜೆಪಿ ವಿರುದ್ಧ ಕಿಡಿಕಾರಿರುವ ಅವರು, ಚುನಾವಣೆ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ನೀಡಿದ್ದ ಭರವಸೆಗಳನ್ನು ಈಡೇರಿಸಿಲ್ಲ. ಉತ್ತರಪ್ರದೇಶದಲ್ಲಿ ಸಮುದಾಯಗಳನ್ನು ಒಡೆಯಲು ಬಿಜೆಪಿ ಗುರಿಯನ್ನು ಹೊಂದಿದ್ದು, ಇದಕ್ಕೆ ಮುಜಾಫರ್ ನಗರ ಹಾಗೂ ದಾದ್ರಿ ಪ್ರಕರಣಗಳೇ ಪ್ರಮುಖ ಉದಾಹರಣೆಗಳಾಗಿವೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com