ರದ್ದುಗೊಂಡಿರುವ ಮುಖಬೆಲೆಯ ನೋಟುಗಳನ್ನು ಹುಂಡಿಗೆ ಹಾಕದಂತೆ ಭಕ್ತಾದಿಗಳಿಗೆ ಬೃಂದಾವನದಲ್ಲಿ ಸೂಚನೆ ನೀಡಲಾಗಿದ್ದರೆ, ತಿರುಪತಿಯಲ್ಲಿ ಮಾತ್ರ ಎಲ್ಲಾ ನೋಟುಗಳನ್ನು ಸ್ವೀಕರಿಸಲಾಗುತ್ತಿದೆ. ಆದರೆ ಭಕ್ತಾದಿಗಳಿಗೆ ಪ್ರಸಾದ ಮತ್ತು ಟಿಕೆಟ್ ಗಳನ್ನು ನೀಡಲು ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಯಂತ್ರಗಳನ್ನು ಬಳಕೆ ಮಾಡಲಾಗುತ್ತಿದೆ. ಅಲ್ಲದೇ ಯಾತ್ರಾರ್ಥಿಗಳಿಗೆ ಉಚಿತವಾಗಿ ಊಟದ ವ್ಯವಸ್ಥೆಯನ್ನೂ ಕಲ್ಪಿಸಲಾಗುತ್ತಿದೆ.