ನಮ್ಮ ದೇಶದ ಜನತೆ ನಿರಂತರವಾಗಿ ಭಯೋತ್ಪಾದನೆ, ತೀವ್ರಗಾಮಿತ್ವವನ್ನು ಎದುರಿಸುತ್ತಿದ್ದಾರೆ. ಭಯೋತ್ಪಾದನೆಯನ್ನು ಜಾಗತಿಕ ಸವಾಲು ಎಂದು ನಾವು ಗುರುತಿಸಿದ್ದೇವೆ, ಭಯೋತ್ಪಾದನೆಗೆ ಗಡಿ ರೇಖೆಗಳು ಇಲ್ಲ. ಅಂತೆಯೇ ವಿವಿಧ ರೀತಿಯ ಪಾತಕ ಕೃತ್ಯಗಳೊಂದಿಗೆ ನಂಟು ಹೊಂದಿದ್ದು ಅದನ್ನು ಬೆಳೆಸಿರುವ ಪೋಷಿಸುತ್ತಿರುವ ರಾಷ್ಟ್ರಗಳ ಪೈಕಿ ಭಾರತದ ನೆರೆರಾಷ್ಟ್ರವೂ ಸೇರಿದೆ ಎಂದು ಪ್ರಧಾನಿ ಮೋದಿ ಪಾಕ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.