ಕುಡಿದ ಅಮಲಿನಲ್ಲಿ ಮದುವೆ ಸಮಾರಂಭದಲ್ಲಿ ಗಾಡ್ ವುಮನ್ ನಿಂದ ಶೂಟಿಂಗ್: ಒಂದು ಸಾವು

ಮದುವೆ ಸಮಾರಂಭದಲ್ಲಿ ಕುಡಿದ ಅಮಲಿನಲ್ಲಿ ಗಾಡ್ ವುಮೆನ್ ಮತ್ತು ಆಕೆಯ ಖಾಸಗಿ ಸೆಕ್ಯೂರಿಟಿ ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿ ಮೂವರು...,
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಛಂಡಿಗಡ: ಮದುವೆ ಸಮಾರಂಭದಲ್ಲಿ ಕುಡಿದ ಅಮಲಿನಲ್ಲಿ ಗಾಡ್ ವುಮೆನ್ ಮತ್ತು ಆಕೆಯ ಖಾಸಗಿ ಸೆಕ್ಯೂರಿಟಿ ನಡೆಸಿದ ಗುಂಡಿನ ದಾಳಿಯಲ್ಲಿ ಓರ್ವ ಮಹಿಳೆ ಸಾವನ್ನಪ್ಪಿ ಮೂವರು ಗಾಯಗೊಂಡಿರುವ ಘಟನೆ ಕರ್ನಾಲ್ ಎಂಬಲ್ಲಿ ನಡೆದಿದೆ.

ಛಂಡಿಗಡದಿಂದ ಸುಮಾರು 140 ಕಿ.ಮೀ ದೂರದಲ್ಲಿರುವ ಕರ್ನಾಲ್ ನಲ್ಲಿರುವ ಸಾವಿತ್ರಿ ಲಾನ್ಸ್ ಮ್ಯಾರೇಜ್ ಪ್ಯಾಲೇಸ್ ನಲ್ಲಿ ಈ ದುರಂತ ನಡೆದಿದೆ.

ಮೃತ ಮಹಿಳೆ ಮತ್ತು ಗಾಯಗೊಂಡಿರುವ ಇಕರರು ವಿವಾಹ ಸಮಾರಂಭದಲ್ಲಿ ಪಾಲ್ಗೋಳ್ಳಲು ಆಗಮಿಸಿದ್ದರು, ಈ ವೇಳೆ ಸಾದ್ವಿ ದೇವ ಠಾಕೂರ್ ಮತ್ತು ಆಕೆಯ ಸಹಚರರು ಕುಡಿದ ಅಮಲಿನಲ್ಲಿ ತಮ್ಮ ಬಳಿಯಿದ್ದ ಶಸ್ತ್ರಾಸ್ತ್ರಗಳಿಂದ ಹಲವು ಸುತ್ತು ಫೈರ್ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹಿಂದೂ ಗಾಡ್ ವುಮನ್ ಮತ್ತು ಆಕೆಯ ಸಹಚರರ ವಿರುದ್ಧ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com