ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿರುವ ಟಿಡಿಪಿ ಸಂಸದ ಎನ್ ಶಿವಪ್ರಸಾದ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) ಬ್ಯಾಂಕ್ ಬ್ರಾಂಚ್ ನ ಮುಂಭಾಗದಲ್ಲಿ ಜಾನಪದ ಕಲಾವಿದನ ವೇಷ ಧರಿಸಿ ಪ್ರತಿಭಟನೆ ನಡೆಸಿದ್ದಾರೆ. ವೀಣೆಯನ್ನು ಕೈಯ್ಯಲ್ಲಿ ಹಿಡಿದು ಬುರ್ರಕಥಾ ಗಾಯನವನ್ನು ನಡೆಸುವ ಮೂಲಕ 1000, 500 ರೂ ನೋಟುಗಳ ಚಲಾವಣೆ ರದ್ದುಗೊಂಡಿರುವುದರಿಂದ ಜನಸಾಮಾನ್ಯರಿಗೆ ಉಂಟಾಗಿರುವ ಸಂಕಷ್ಟವನ್ನು ಎತ್ತಿತೋರಿಸಲು ಟಿಡಿಪಿ ಸಂಸದ ಶಿವಪ್ರಸಾದ್ ಯತ್ನಿಸಿದ್ದಾರೆ.