ಉಗ್ರರ ಗಡಿನುಸುಳುವಿಕೆ ಯತ್ನ ವಿಫಲಗೊಳಿಸಿದ ಭಾರತೀಯ ಸೇನೆ

ಕಳೆದ ರಾತ್ರಿ 10.30ರ ಸುಮಾರಿಗೆ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದ 46 ರಾಷ್ಟ್ರೀಯ ರೈಫಲ್ಸ್ ಕ್ಯಾಂಪ್ ಮೇಲೆ ದಾಳಿ ನಡೆಸಿದ್ದ ಬಳಿಕ ಇದೀಗ...
ಬಿಎಸ್ಎಫ್
ಬಿಎಸ್ಎಫ್

ಗುರುದಾಸ್ಪುರ್(ಪಂಜಾಬ್): ಕಳೆದ ರಾತ್ರಿ 10.30ರ ಸುಮಾರಿಗೆ ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದ 46 ರಾಷ್ಟ್ರೀಯ ರೈಫಲ್ಸ್ ಕ್ಯಾಂಪ್ ಮೇಲೆ ದಾಳಿ ನಡೆಸಿದ್ದ ಬಳಿಕ ಇದೀಗ ಪಂಜಾಬ್ ನ ಗುರುದಾಸ್ ಪುರದಲ್ಲಿ ಗಡಿ ನುಸುಳಲು ಉಗ್ರರು ಯತ್ನಿಸಿದ್ದು ಭಾರತೀಯ ಸೇನೆಯ ಯೋಧರನ್ನು ಕಂಡು ಹೆದರಿ ಪರಾರಿಯಾಗಿದ್ದಾರೆ.

ಗುರುದಾಸ್ಪುರದಲ್ಲಿರುವ ಸೇನಾ ಶಿಬಿರವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲು ಉಗ್ರರು ಸಂಚು ರೂಪಿಸಿ ಗಡಿ ನುಸುಳಲು ಯತ್ನಿಸಿದ್ದು ಉಗ್ರರು ಗಡಿ ನುಸುಳುವ ವೇಳೆ ಭಾರತೀಯ ಯೋಧರು ಗುಂಡಿನ ದಾಳಿ ನಡೆಸಿದ್ದು ಭಾರತೀಯ ಸೇನೆಯನ್ನು ಕಂಡು ಉಗ್ರರು ಪರಾರಿಯಾಗಿದ್ದಾರೆ.

ಪರಾರಿಯಾಗಿರುವ ಉಗ್ರರ ತಂಡವನ್ನು ಪತ್ತೆ ಹಚ್ಚಲು ಭಾರತೀಯ ಯೋಧರು ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ಬಿಎಸ್ಎಫ್ ಇನ್ಸ್ ಪೆಕ್ಟರ್ ಅನಿಲ್ ಪಲಿವಾಲ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com