ಜೆಟ್‌ ಏರ್ ವೇಸ್ ವಿಮಾನ ದುರಂತದಿಂದ ಪಾರು; ತನಿಖೆಗೆ ಆದೇಶ

ಲಂಡನ್‌ನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ಜೆಟ್‌ ಏರ್‌ವೇಸ್‌ ವಿಮಾನ ದೊಡ್ಡ ಅನಾಹುತದಿಂದ ಪಾರಾಗಿದ್ದ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಸರ್ಕಾರ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಲಂಡನ್‌ನಿಂದ ಮುಂಬೈಗೆ ಪ್ರಯಾಣಿಸುತ್ತಿದ್ದ ಜೆಟ್‌ ಏರ್‌ವೇಸ್‌ ವಿಮಾನ ದೊಡ್ಡ ಅನಾಹುತದಿಂದ ಪಾರಾಗಿದ್ದ ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸುವಂತೆ ಸರ್ಕಾರ ಆದೇಶಿಸಿದೆ.

ಆಗಸ್ಟ್ 30 ರಂದು 246 ಜನರಿದ್ದ ಬೋಯಿಂಗ್‌ 777-300ಇಆರ್‌ ವಿಮಾನವು ಟೇಕ್‌‌ ಆಫ್‌ ವೇಳೆ ನಿರ್ಧಿಷ್ಟ ಮಟ್ಟಕ್ಕೆ ಹಾರದೆ ಪವಾಡ ಸದೃಶ ರೀತಿಯಲ್ಲಿ ಅಪಾಯದಿಂದ ಪಾರಾಗಿತ್ತು.ಈ ಕುರಿತು ತನಿಖೆಗೆ ಸರ್ಕಾರ ಆದೇಶಿಸಿದೆ.

ಲಂಡನ್‌ನ ಹೀಥ್ರೂ ಏರ್‌ಪೋರ್ಟ್‌ನಿಂದ ಮುಂಬೈಗೆ 777-300ಇಆರ್‌ ವಿಮಾನ ಟೇಕ್‌ ಆಫ್‌ ಆಗಬೇಕಿತ್ತು. ಈ ಟೇಕ್‌ ಆಫ್‌ ವೇಳೆ ಪೈಲಟ್‌ ಪೂರ್ಣ ರನ್‌‌ವೇ ಬಳಸಲು ವಿಫಲನಾಗಿದ್ದ. ಇದರಿಂದ ವಿಮಾನವು ನಿರ್ಧಿಷ್ಟ ಮಟ್ಟಕ್ಕೆ ಹಾರದೆ ಆತಂಕ ಸೃಷ್ಟಿಯಾಗಿತ್ತು. .

ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಸಂಪೂರ್ಣ ತನಿಖೆಗೆ ದ್ವಿಸದಸ್ಯರ ಸಮಿತಿಯನ್ನು ನೇಮಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com